ಮಗಳ ರಕ್ಷಣೆಗೆ ಹೋದ ತಂದೆ ತಾಯಿ ಕೂಡ ನೀರು ಪಾಲು…!

ಬಾಗಲಕೋಟೆ : ಮಂದಿರದಲ್ಲಿ ಉಪಹಾರ ಮುಗಿಸಿ ಕೈ‌ತೊಳೆಯಲು ಹೋಗಿ ಮಲಪ್ರಭಾ ನದಿಗೆ ಬಿದ್ದು ಒಂದೇ ಕುಟುಂಬದ ‌ಮೂವರು ಮೃತಪಟ್ಟ ಘಟನೆ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದ ಬಳಿ ನಡೆದಿದೆ.

ಮೃತರನ್ನು ವಿಶ್ವನಾಥ್ ಮಾವಿನ ಮರದ (40), ಪತ್ನಿ ಶ್ರಿದೇವಿ ಮಾವಿನಮರದ (32) ಹಾಗೂ ಮಗಳು ನಂದಿನಿ (12) ಎಂದು ಗುರುತಿಸಲಾಗಿದೆ.

ಗದಗ ಜಿಲ್ಲೆಯ ರೋಣದಲ್ಲಿ ವಾಸವಾಗಿದ್ದ ಕುಟುಂಬ ಶಿವಯೋಗಿ ಮಂದಿರಕ್ಕೆ ತೆರಳಿದ್ದ ವೇಳೆ ಉಪಹಾರ ಮುಗಿಸಿ ಕೈತೊಳೆಯಲು ತೆರಳಿದ್ದರು. ಈ ವೇಳೆ ಮಗಳು ಬಿದ್ದಿದ್ದು, ಅವಳ ರಕ್ಷಣೆಗೆ ಹೋದ ದಂಪತಿ ಕೂಡ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. 

ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದಾಗ ಶ್ರೀದೇವಿ ಅವರ ಶವ ಸಿಕ್ಕಿದ್ದು, ಇನ್ನಿಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply