ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಹಿರಿಯಡಕ ಘಟಕದ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ

ನಾಡೋಜ ಡಾ|| ಜಿ. ಶಂಕರ್ ರವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆಯ ಹಿರಿಯಡಕ ಘಟಕದ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭವು ದಿನಾಂಕ : 20-03-2022 ರ ಆದಿತ್ಯವಾರ, ಮಾಧವ ಮಂಗಲ ಸಭಾ ಭವನ ಹಿರಿಯಡಕದಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಮೀನು ಮಾರಾಟ ಫೆಡರೇಶನ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಯಶ್ಪಾಲ್ ಸುವರ್ಣ, ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶಿವರಾಮ್ ಕೆ. ಎಂ. ಕೋಟ, ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆಯ ಗೌರವ ಸಲಹಾ ಸಮಿತಿಯ ಸದಸ್ಯರಾದ ಶ್ರೀ ರಮೇಶ್ ವಿ. ಕುಂದರ್ ಕೋಟ, ದ.ಕ. ಜಿಲ್ಲಾ ಮಹಾಜನ ಸಂಘ ಉಚ್ಚಿಲ ಇದರ ಆಡಳಿತ ಸಮಿತಿ ಸದಸ್ಯರಾದ ಶ್ರೀ ರವೀಂದ್ರ ಶ್ರೀಯಾನ್, ಬಜೆ ಮೇಲ್ಸಾಲು ಮೊಗವೀರ ಸಂಘ (ರಿ.) ಹಿರಿಯಡಕ ಇದರ ಮಾಜಿ ಅಧ್ಯಕ್ಷರಾದ ಶ್ರೀ ಸುಂದರ್ ಕಾಂಚನ್ ಬಜೆ ಮೇಲ್ಸಾಲು ಮೊಗವೀರ ಸಂಘ (ರಿ.) ಹಿರಿಯಡಕ ಇದರ ಮಾಜಿ ಅಧ್ಯಕ್ಷರಾದ ಶ್ರೀ ಉದಯ ಬಂಗೇರ ಬಜೆ ಮೊದಲಾದವರು ಉಪಸ್ಥಿತರಿದ್ದರು.

ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆಯ ಹಿರಿಯಡಕ ಘಟಕದ ಅಧ್ಯಕ್ಷರಾದ ಶ್ರೀ ವಿಜಯ ಮೆಂಡನ್ ರವರು ನೂತನ ಆಧ್ಯಕ್ಷರಾದ ಶ್ರೀ ಮಹೇಶ್ ಪುತ್ರನ್ ಹಿರೇಬೆಟ್ಟು ರವರಿಗೆ ಅಧಿಕಾರ ಹಸ್ತಾಂಸಿದರು. ಕಾರ್ಯದರ್ಶಿ ಶ್ರೀ ಮಂಜುನಾಥ್ ಮದಗ ಹಾಜಾರಿದ್ದರು, ಶ್ರೀಮತಿ ಸುಮಾ ಕೊಂಡಾಡಿ ಸ್ವಾಗತಿಸಿದರು. ಶ್ರೀ ಬಾಲಕೃಷ್ಣ ಬಿ. ಕೆ. ಕಾರ್ಯಕ್ರಮ ನಿರೂಪಿಸಿದರು., ಶ್ರೀ ನವೀನ್ ಕೆ. ಶೆಟ್ಟಿಬೆಟ್ಟು ವಂದಿಸಿದರು.

 
 
 
 
 
 
 
 
 
 
 

Leave a Reply