ಮಣೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಬ್ರಹ್ಮಕಲಶ ಸಂಭ್ರಮ

ಕೋಟ:ಪುರಾಣ ಪ್ರಸಿದ್ಧ ಕ್ಷೇತ್ರ ಕೋಟದ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಗರುಗಣಪತಿ ಪೂಜೆ,ಪುಣ್ಯಾಹ ವಾಚನ,ದೇವನಾಂದಿ,ಋತ್ವಿಗ್ವರಣೆ,ಶ್ರೀ ಮಹಾಲಿಂಗೇಶ್ವರ ಹಾಗೂ ಹೇರಂಬ ಗಣಪತಿ,ಪಾರ್ವತಿ ಅಮ್ಮನವರಿಗೆ ಪಂಚಾಮೃತ ಸೇವೆ, ನವಗ್ರಹ ಹೋಮ, ದುರ್ಗಾಹೋಮ, ಸಂಜೆ 5ಗ. ಯಿಂದ ಕಲಶಮಂಡಲ ರಚನೆ,ಮಂಡಲ ದೇವತಾ ಆರಾಧನೆ, ಪಂಚ ಸಹಿತ ಪಂಚಶತ ಬ್ರಹ್ಮಕಲಶ ಸ್ಥಾಪನೆ ,ಕಲಾತತ್ವ ದೇವತಾ ಆವಾಹನೆ,ಹೋಮಾದಿ ಕಾರ್ಯಗಳು, ಅಷ್ಟಾವಧಾನ ಸೇವೆ ಕಾರ್ಯಕ್ರಮಗಳು ತಂತ್ರಿಗಳಾದ ಗಣೇಶ್ ಐತಾಳ್ ಸಾಲಿಗ್ರಾಮ ನೇತ್ರತ್ವದಲ್ಲಿ ವೇ.ಮೂ.ಗರಿಕೆಮಠ ರಾಮಪ್ರಸಾದ ಅಡಿಗರ ಪೌರೋಹಿತ್ಯದಲ್ಲಿ ನಡೆಯಿತು.

 

ದೇವಳದ ಪೂಜಾಕೈಂಕರ್ಯದಲ್ಲಿ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಅರುಣಾಚಲ ಮಯ್ಯ ದಂಪತಿಗಳು,ದೇವಳದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ದಂಪತಿಗಳು ಪಾಲ್ಗೊಂಡರು.

ದೇವಳದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಅಧ್ಯಕ್ಷತೆಯಲ್ಲಿ ವಿವಿಧ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು ಗುರುವಾರದಿಂದಲೆ ಆರಂಭಗೊಂಡಿತು.

ದೇವಳದ ಟ್ರಸ್ಟಿಗಳಾದ ಅಶೋಕ್ ಶೆಟ್ಟಿ ಕೊಯ್ಕೂರು,ಅಚ್ಯತ್ ಹಂದೆ,ಕೃಷ್ಣ ದೇವಾಡಿಗ,ಬಾಬು ಜಿ,ಸುಫಲ ಶೆಟ್ಟಿ,ಎಂ.ದಿವ್ಯ ಪ್ರಭು,ದಿನೇಶ್ ಆಚಾರ್ಯ, ಅರ್ಚಕ ಪ್ರತಿನಿಧಿ ರವಿ ಐತಾಳ್ ,ಹಿರಿಯರಾದ ಭಾರತಿ ವಿಷ್ಣುಮೂರ್ತಿ ಮಯ್ಯ ಮತ್ತಿತರರು ಪಾಲ್ಗೊಂಡರು.

 
 
 
 
 
 
 
 
 
 
 

Leave a Reply