ಉಡುಪಿ, ದ.ಕ, ಕಾಸರಗೋಡು ಜಿಲ್ಲಾ ದ್ರಾವಿಡ ಬ್ರಾಹ್ಮಣರ ಸಂಘದ ವಾರ್ಷಿಕ ಮಹಾಸಭೆ

ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಉಡುಪಿ, ದ.ಕ, ಕಾಸರಗೋಡು ಜಿಲ್ಲಾ ದ್ರಾವಿಡ ಬ್ರಾಹ್ಮಣರ ಸಂಘದ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಿ ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ದೇವರಲ್ಲಿ ನಮ್ಮ ಪ್ರಾರ್ಥನೆಯೊಂದಿಗೆ ದೇಶಕ್ಕಾಗಿ ಮತ್ತು ದೇಶ ಸೇವಕರಿ ಗಾಗಿ ಪ್ರಾರ್ಥಿಸೋಣ ಎಂದು ಅನುಗ್ರಹಿಸಿದರು. 
ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪರಮಗುರುಗಳಾದ ಶ್ರೀವಿಭು ದೇಶತೀರ್ಥರ ದೂರದರ್ಶಿತ್ವವನ್ನು ವಿವರಿಸಿ ಅನುಗ್ರಹಿಸಿದರು. ಶ್ರೀವಿಶ್ವಪ್ರಿಯತೀರ್ಥರ ಸನ್ಯಾಸದ 50ನೇ ವರ್ಷದ ಶುಭಸಂದರ್ಭದ ಸಲುವಾಗಿ ಗೌರವಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷರುಗಳಾದ  ಪದ್ಮನಾಭ ಭಟ್ ರವರು ಸ್ವಾಗತಿಸಿ, ಯು.ಕೆ.ರಾಘವೇಂದ್ರ ರಾವ್ ರವರು ಧನ್ಯವಾದವಿತ್ತರು. ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯರು ಕಾರ್ಯಕ್ರಮ ನಿರ್ವಹಿಸಿದರು. ಪದಾಧಿಕಾರಿಗಳಾದ ಪ್ರೊ.ರಾಧಾಕೃಷ್ಣರವರು ಅಭಿನಂದನಾ ಭಾಷಣವನ್ನು ಮಾಡಿದರು. ಪ್ರೊ.ಶ್ರೀಶ ಆಚಾರ್, ಗುರುರಾಜ ಭಟ್, ಬೈಕಾಡಿ ಶ್ರೀನಿವಾಸ ರಾವ್ ಮೊದಲಾದ ವರು ಉಪಸ್ಥಿತರಿದ್ದರು. 
 
 
 
 
 
 
 
 
 
 
 

Leave a Reply