ಶ್ರೀಕೃಷ್ಣಮಠಕ್ಕೆ ಅನ್ನದಾನಕ್ಕಾಗಿ ಹೊರೆಕಾಣಿಕೆ

ಉಡುಪಿ: ಶ್ರೀಕೃಷ್ಣಮಠಕ್ಕೆ ಉಜ್ವಲ್ ಡೆವಲಪರ್ಸ್ ಮಾಲಕ, ಉದ್ಯಮಿ ಪುರೋಷೋತ್ತಮ ಶೆಟ್ಟಿ ಅನ್ನದಾನಕ್ಕಾಗಿ ಗುರುವಾರ ಹೊರೆಕಾಣಿಕೆಯಾಗಿ ಅಕ್ಕಿ, ಬೆಲ್ಲ, ಕಾಯಿ ಸಮರ್ಪಿಸಿದರು. ಬಳಿಕ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕ ಗೋವಿಂದರಾಜ್, ಶ್ರೀಕೃಷ್ಣ ಸೇವಾ ಬಳಗದ ಪ್ರದೀಪ ರಾವ್, ಮಠದ ಪಿ.ಆರ್.ಓ. ಶ್ರೀಶ ಭಟ್ ಕಡೆಕಾರ್ ಮೊದಲಾದವರಿದ್ದರು.

 
 
 
 
 
 
 
 
 
 
 

Leave a Reply