ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಮಹಾಸಭೆ

 ಉಡುಪಿ: ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಉಡುಪಿ-ಇದರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ: ೨೬-೦೮-೨೦೨೨ನೇ ಶುಕ್ರವಾರದಂದು ಮಿನಿಹಾಲ್ ಪುರಭವನ ಅಜ್ಜರಕಾಡು, ಉಡುಪಿ ಸಂಘದ ಅಧ್ಯಕ್ಷರಾದ ಶ್ರೀ ಕೆ. ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘದ ನಿರ್ದೇಶಕರಾದ ಶ್ರೀ ಶ್ರೀಶ ಕೊಡವೂರು ಸ್ವಾಗತಿಸಿದರು. ಸಂಘದ ಅಧ್ಯಕ್ಷ ಶ್ರೀ ಕೆ. ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು . ಮಹಾಸಭೆಯಲ್ಲಿ ಸಂಘದ ಸದಸ್ಯರಿಗೆ ೧೦% ಡಿವಿಡೆಂಡ್ ಘೋಷಿಸಲಾಯಿತು.

 ಸಂಘದ ಉಪಾಧ್ಯಕರಾದ ಶ್ರೀ ರಮೇಶ್ ಶೆಟ್ಟಿ ಹಾಗೂ ನಿರ್ದೇಶಕರಾದ ಶ್ರೀ ರಾಮಚಂದ್ರ ಸನಿಲ್, ಶ್ರೀ ರಮೇಶ್ ಶೆಟ್ಟಿ ಜಾರ್ಕಳ, ಶ್ರೀ ಗಣೇಶ್ ಕುಮಾರ್, ಸುರೇಶ್ ಪ್ರಭು, ಶ್ರೀಮತಿ ರಾಧಿಕಾ ಕಾಮತ್, ಶ್ರೀಮತಿ ಶಾಂಭವಿ ಕೆ., ಶ್ರೀಮತಿ ಸ್ನೇಹಪ್ರಭಾ ಕಮಲಾಕ್ಷ, ಶ್ರೀಮತಿ ರಾಧಿಕಾ ಕಾಮತ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶ್ರೀಮತಿ ರಂಜಿತಾ ಪ್ರವೀಣ್‌ರವರು ೨೦೨೧-೨೨ರ ಆಡಳಿತ ವರದಿಯನ್ನು ಮಂಡಿಸಿದರು. ನಿರ್ದೇಶಕರಾದ ಶ್ರೀ ಶಿವಪ್ರಸಾದ್ ಶೆಟ್ಟಿ ಅವರ ಧನ್ಯವಾದದೊಂದಿಗೆ ಸಭೆಯು ಮುಕ್ತಾಯವಾಯಿತು.

 
 
 
 
 
 
 
 
 

Leave a Reply