ಪತ್ನಿಯನ್ನು ಕಳೆದುಕೊಂಡು ಚಿಂತೆ; ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ!

ಪತ್ನಿಯನ್ನು ಕಳೆದುಕೊಂಡು ಚಿಂತೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಲೆವೂರಿನಲ್ಲಿ ನಡೆದಿದೆ.

ಸ್ಥಳೀಯ ಕೃಷ್ಣಾನಂದ ಶೆಣೈ (50) ಆತ್ಮಹತ್ಯೆ ಮಾಡಿಕೊಂಡವರು. ಇವರು ಎಮ್‌.ಐ.ಟಿ ಸೆಕ್ಯೂರಿಟಿ ವಿಭಾಗದಲ್ಲಿ ಅಟೆಂಡರ್ ಆಗಿ ಕೆಲಸ ಮಾಡಿಕೊಂಡಿದ್ದು, ಕೆಲಸ ಮುಗಿಸಿ ಸಂಜೆ 6 ಗಂಟೆಗೆ ಮನೆಗೆ ಬರುತ್ತಿದರು. 8 ತಿಂಗಳ ಹಿಂದೆ ಅವರ ಹೆಂಡತಿ ಮೃತಪಟ್ಟಿದ್ದು, ಆ ಬಳಿಕ ಕೃಷ್ಣಾನಂದ ಶೆಣೈ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ನಿನ್ನೆ ಅವರು ಕೆಲಸಕ್ಕೆ ಹೋದವರು ವಾಪಸು ಬಾರದೆ ಇದ್ದಾಗ, ಈ ಬಗ್ಗೆ ಸಂಶಯಗೊಂಡು ಮನೆಯವರು ಅವರು ಕೆಲಸ ಮಾಡುತ್ತಿದ್ದ ಎಮ್‌ಐಟಿಗೆ ತೆರಳಿಗೆ ತೆರಳಿ ನೋಡಿದಾಗ, ಅಲ್ಲಿನ ಕಟ್ಟಡದ ಕೊಠಡಿವೊಂದರಲ್ಲಿ ಕೃಷ್ಣಾನಂದ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಅವರ ಹೆಂಡತಿ ತೀರಿಕೊಂಡ ವೇದನೆಯಲ್ಲಿ ಜೀವನದಲ್ಲಿ ಜಿಗುಪ್ಪೆಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೃತರ ಮಗ ಕಾರ್ತಿಕ್ ಶೆಣೈ ಅವರು ನೀಡಿದ ಮಾಹಿತಿಯಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply