ಉಪ್ಪೂರು ಹಡಿಲು ಭೂಮಿ ಕೃಷಿಯ ಅಕ್ಕಿ ವಿತರಣೆ

ಉಪ್ಪೂರು: ಯುವ ವಿಚಾರ ವೇದಿಕೆ (ರಿ.) ಉಪ್ಪೂರು, ಕೊಳಲಗಿರಿ ವತಿಯಿಂದ ಸಂಘವು ಹಡಿಲು ಭೂಮಿ ಕೃಷಿ ಯೋಜನೆಯಿಂದ ಕೃಷಿ ಮಾಡಿ ದೊರೆತ ಅಕ್ಕಿಯನ್ನು ಉಪ್ಪೂರು ಗ್ರಾಮಾದ ಸಾಲ್ಮರದಲ್ಲಿರುವ ಸ್ಪಂದನ ಭೌದ್ಧಿಕ ದಿವ್ಯಾಂಗರ ವಸತಿ ಕೇಂದ್ರಕ್ಕೆ ವಿತರಿಸಲಾಯಿತು.

ಸುಮಾರು 2 ಕ್ವಿಂಟಾಲ್ ಅಕ್ಕಿಯನ್ನು ಸ್ಪಂದನ ಕೇಂದ್ರಕ್ಕೆ ನೀಡಲಾಯಿತು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೂಲಕ ಅಕ್ಕಿಯನ್ನು ಸಂಸ್ಥೆಗೆ ಹಸ್ತಾಂತರಿಸಲಾಯಿತು. 

ಬಳಿಕ ಮತನಾಡಿದ ಅವರು ಕೃಷಿಯ ಅಭಿವ್ರದ್ಧಿಯಲ್ಲಿ ಯುವಜನರು ಕ್ರಿಯಾಶೀಲತೆಯಿಂದ ಭಾಗವಹಿಸಿದರೆ ಗ್ರಾಮೀಣಭಿವೃದ್ಧಿಯ ಪರಿಕಲ್ಪನೆ ಸಾಕಾರಗೊಳ್ಳುವುದು ಕೃಷಿಯ ಬಗ್ಗೆ ಯುವಜನರಲ್ಲಿ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಯುವ ವಿಚಾರ ವೇದಿಕೆಯ ಕಾರ್ಯ ಶ್ಲ್ಯಾಘನೀಯ ಎಂದರು.

ಗ್ರಾಮ ಪಂಚಾಯತ್ ಸದಸ್ಯ ಅಶ್ವಿನ್ ರೋಚ್ ಶುಭ ಹಾರೈಸಿದರು. ಸ್ಪಂದನ ಸ್ಥಾಪಕ ಪ್ರಾಂಶುಪಾಲ ಜನಾರ್ಧನ್,ಉಮೇಶ್, ಯುವ ವಿಚಾರ ವೇದಿಕೆಯ ಅಧ್ಯಕ್ಷ ದಿನೇಶ್ ಶೆಟ್ಟಿ, ಹಿರಿಯ ಸದಸ್ಯ ಮಾಧವ ಪಾಣ, ಕಾರ್ಯದರ್ಶಿ ಸುಕೇಶ್ ಪಾಣ, ಸದಸ್ಯರುಗಳಾದ ಶೋಭಾ ಯೋಗಿಶ್, ಶಕುಂತಲ, ಬೃಂದಾ, ಸೌಮ್ಯ, ಹರಿಣಾಕ್ಷಿ, ಸದಾಶಿವ, ಅಶೋಕ್, ರವೀಂದ್ರ, ಶಶಿಕುಮಾರ್, ಸುಬ್ರಮಣ್ಯ, ವೈಭವ್, ಶ್ರೇಯಸ್ ಉಪಸ್ಥಿತರಿದ್ದರು. ಸುಬ್ರಮಣ್ಯ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸದಾಶಿವ ಕುಮಾರ್ ವಂದಿಸಿದರು. 

 
 
 
 
 
 
 
 
 
 
 

Leave a Reply