ಉಡುಪಿ: ಹೆಬ್ಬಾವು ಹಿಡಿದ ಬಾಲಕನ ಧೈರ್ಯಕ್ಕೆ ಎಲ್ಲೆಡೆ ಪ್ರಶಂಸೆ

ಉಡುಪಿ: ಜಿಲ್ಲೆಯ ಕೋಟ ಸಮೀಪದ ಸಾಲಿಗ್ರಾಮದಲ್ಲಿ ಭಾರೀ ಗಾತ್ರದ ಹೆಬ್ಬಾವೊಂದನ್ನು ತಂದೆ-ಮಗ ಹಿಡಿದ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಸ್ಥಳೀಯರಾದ ಐತಾಳರು ಮನೆಯಲ್ಲೇ ಪ್ರಾಣಿಪಕ್ಷಿಗಳನ್ನು ಸಾಕುತ್ತಾರೆ. ಇವರು ಉರಗ ತಜ್ಞರೂ ಹೌದು. ಇವರ ಮನೆಯ ಸಮೀಪ ಪ್ರತ್ಯಕ್ಷಗೊಂಡ ಭಾರೀ ಹೆಬ್ಬಾವನ್ನು ತಂದೆ ಮಗ ಹಿಡಿದು ಚೀಲಕ್ಕೆ ತುಂಬಿಸಿದ್ದಾರೆ.ಜನರು‌ ದೂರ ನಿಂತು ನೋಡುತ್ತಿರುವಾಗಲೇ ಮಗ ಬಂದು ಹೆಬ್ಬಾವಿನ ತಲೆಯನ್ನು ಹಿಡಿದು ತಂದೆಗೆ ನೆರವಾಗಿದ್ದಾನೆ. ಜನರು ಹತ್ತಿರ ಬರಲೂ ಭಯಪಡುತ್ತಿದ್ದಾಗ ಈ ಬಾಲಕ ಹಾವಿನ‌ ತಲೆ ಹಿಡಿದು ಚೀಲಕ್ಕೆ ತುಂಬಿಸಿದ್ದನ್ನು ಜನರು ಮೂಕವಿಸ್ಮಿತರಾಗಿ ನೋಡಿದ್ದಾರೆ. ಅಲ್ಲದೇ ಹುಡುಗನ ಧೈರ್ಯಕ್ಕೆ “ಭೇಷ್ ಭೇಷ್” ಎಂದಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

 
 
 
 
 
 
 
 
 
 
 

Leave a Reply