ಬಿ. ರವಿರಾಜ್ ಹೆಗ್ಡೆ ನಿಧನ

ಉಡುಪಿ ಕಕ್ಕುಂಜೆಯ ಬಿ. ರವಿರಾಜ ಹೆಗ್ಡೆಯವರು (೮೦ ವರ್ಷ) ಅಲ್ಪಕಾಲದ ಅಸೌಖ್ಯದಿಂದ ಇಂದು (೨೦.೧೧.೨೦೨೩) ನಿಧನರಾದರು.

ಬೇಳೂರು ದೊಡ್ಡಮನೆ ಪಟೇಲ್ ರಾಮಣ್ಣ ಹೆಗ್ಡೆಯವರ ಪುತ್ರರಾದ ಇವರು ಪ್ರಗತಿಪರ ಕೃಷಿಕರಾಗಿದ್ದರು. ವೃತ್ತಿಯಲ್ಲಿ ವಿದ್ಯುತ್ ಗುತ್ತಿಗೆದಾರರಾಗಿದ್ದು, ಯಕ್ಷಗಾನದಲ್ಲಿ ಅತೀವ ಒಲವು ಹೊಂದಿದ್ದರು.

ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಅವರ ಸೂಚನೆಯಂತೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದೇಹ ದಾನ ಮಾಡಲಿರುವರು.

ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದು, ಕೆಲವು ವರ್ಷಗಳ ಹಿಂದೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆಸಲ್ಲಿಸಿದ್ದರು. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

 
 
 
 
 
 
 
 
 
 
 

Leave a Reply