“ಸಂಗೀತ ಸಿದ್ಧ ಆಹಾರವಲ್ಲ”- ರಾಜೇಶ್ ಕಾಳಿಂಗ ರಾವ್

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ ಮೂರನೆಯ ಸೆಮೆಸ್ಟರ್ ವಿದ್ಯಾರ್ಥಿಗಳಿಗಾಗಿ ಈಚೆಗೆ ಸಂಗೀತ ರಸಗ್ರಹಣ ಕಾರ್ಯಕ್ರಮವನ್ನು ಖ್ಯಾತ ಯುವ ಗಾಯಕ ಶ್ರೀ ರಾಜೇಶ್ ಕಾಳಿಂಗ ರಾವ್ ನಡೆಸಿಕೊಟ್ಟರು.” ಸಂಗೀತವೆಂಬುದು ರೆಡಿಮೇಡ್ ಫುಡ್ ಅಲ್ಲ.ಅದನ್ನು ಶ್ರದ್ಧೆಯಿಂದ, ಸರಿಯಾಗಿ,ಚೆನ್ನಾಗಿ ಕಲಿಯಬೇಕು.ಕಾರ್ಯಕ್ರಮದಲ್ಲಿ ಹಾಡಲೆಂದು ಒಂದೆರಡು ಹಾಡು ಕಲಿತು ಒಪ್ಪಿಸಿದ ಮಾತ್ರಕ್ಕೆ ಸಂಗೀತಗಾರರಾಗಲು ಸಾಧ್ಯವಿಲ್ಲ. ವಿಷಾದದ ಸಂಗತಿಎಂದರೆ ಇಂದು ಪ್ರಚಾರ ಹೆಚ್ಚಾಗಿದೆ; ಸಾಧನೆ ಕಡಮೆಯಾಗಿದೆ” ಎಂದು ನುಡಿದ ರಾಜೇಶ್ ತಮ್ಮ ಪಿತಾಮಹ ದಿ.ಪಾಂಡೇಶ್ವರ ಕಾಳಿಂಗ ರಾಯರು ಹಾಡಿದ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳಿಂದ ಹಾಡಿಸಿದರು.ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಕಲಾವಿದರ ಪರಿಚಯ ಮಾಡಿಕೊಟ್ಟರು.ಶ್ರೀ ಶ್ರೀ ಧರ ಹೆಗ್ಗಡೆ ಸ್ಮರಣಿಕೆ ನೀಡಿದರೆ ಶ್ರೀ ಪರಸು ದುರ್ಗಪ್ಪ ಎಂ ವಂದನೆ ಸಲ್ಲಿಸಿದರು.

 
 
 
 
 
 
 
 
 
 
 

Leave a Reply