ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 130ನೇ ಮನೆಗೆ ಉಚಿತ ವಿದ್ಯುತ್ ಸಂಪರ್ಕ

ಉಡುಪಿ ನಗರವನ್ನು ನೂರು ಶೇಕಡ ವಿದ್ಯುತ್ ಹೊಂದಿದ ದೇಶದ ಮೊಟ್ಟಮೊದಲ ನಗರವನ್ನಾಗಿ ಮಾಡುವಲ್ಲಿ ದಾಪುಗಾಲು ಇಡುತ್ತಿರುವ ಆಸರೆ ಚಾರಿಟೇಬಲ್ ಟ್ರಸ್ಟ್ (ರಿ) ಕಡಿಯಾಳಿ ಇವರ ನೇತ್ರತ್ವದಲ್ಲಿ ಉಡುಪಿ ನಗರದ ಸುಬ್ರಹ್ಮಣ್ಯ ನಗರ ವಾರ್ಡಿನ ದಲಿತ ಸಮುದಾಯದ ಶ್ರೀಮತಿ ಶಾಂತ, ಮತ್ತು ಶ್ರೀಮತಿ ಸುಮಿತ್ರ ಇವರ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಯಿತು. ಇದುವರೆಗೆ ಟ್ರಸ್ಟ್ ವತಿಯಿಂದ ಉಡುಪಿ ನಗರದ 130 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿದೆ. ದಾನಿಗಳಾದ ಉಡುಪಿ ಮೂಲದ ಗೋವಾದ ಉದ್ಯಮಿ ಶ್ರೀ ಹರೀಶ ಕಲ್ಕೂರ, ಮತ್ತು ಶ್ರೀಮತಿ ಸುಮಾ ಹರೀಶ್ ಕಲ್ಕೂರ ಇವರು ಉಚಿತ ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿ ಮನೆಯವರಿಗೆ ಪಾತ್ರೆ ಬಟ್ಟೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ನಗರ ವಾರ್ಡಿನ ನಗರಸಭಾ ಸದಸ್ಯರಾದ ಶ್ರೀಮತಿ ಜಯಂತಿ ಪೂಜಾರಿ, ಮಾಜಿ ನಗರ ಸಭಾ ಸದಸ್ಯೆ ಶ್ರೀಮತಿ ಸುಬೇದ, ಆಸರೆ ಟ್ರಸ್ಟಿನ ಸದಸ್ಯರಾದ ಶ್ರೀಮತಿ ವಿದ್ಯಾಶಾಮ್ ಸುಂದರ್, ಶ್ರೀನಿವಾಸ್ ರಾವ್ ರಾಜಾರಾಮ್, ಸುರೇಶ್ ಪೂಜಾರಿ, ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply