ಶ್ರೀರಾಮಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಶ್ರೀ ರಾಮನವಮಿ ಯ ಪರ್ವದಿನದಂದು ಶ್ರೀಪೇಜಾವರ ಮಠದ ಆರ್ಥಿಕ ಸಹಕಾರದಲ್ಲಿ ಆಸರೆ ಟ್ರಸ್ಟ್ ಉಡುಪಿ ಉಡುಪಿಯ ಕಲ್ಯಾಣಪುರದ ಗಿರಿಜಾ ಪೂಜಾರ್ತಿ ಮತ್ತು ಬ್ರಹ್ಮಾವತದ ಹೇರೂರಿನ ಜಲಜ ಶೆಡ್ತಿ ಎಂಬ ಇಬ್ಬರು ಆರ್ಥಿಕವಾಗಿ ಅಶಕ್ತರಿಗೆ ನಿರ್ಮಿಸಿದ ಮನೆಗಳ ಗೃಹಪ್ರವೇಶೋತ್ಸವ ನೆರವೇರಿಸಿ ಗೋಧೂಳಿಯ ಮುಹೂರ್ತದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಹಸ್ತಾಂತರಿಸಿದರು . ಅಲ್ಲದೇ ಮನೆಮಂದಿಗೆ ಹೊಸಬಟ್ಟೆ , ರಾಮ -ಕೃಷ್ಣ ದೇವರ ಚಿತ್ರ ದೀಪ ಮತ್ತು ನಿತ್ಯ ಭಜನೆಗಾಗಿ ತಾಳ ಮತ್ತು ಫಲಮಂತ್ರಾಕ್ಷತೆ ನೀಡಿ ಹರಸಿ ಶುಭ ಸಂದೇಶ ನೀಡಿದರು .ಶ್ರೀಪಾದರೇ ಸೂಚಿಸಿದಂತೆ ಎರಡು ಮನೆಗಳಿಗೆ ಅಯೋಧ್ಯಾ ಮತ್ತು ಶ್ರಿರಾಮಸದನ ಎಂಬ ಹೆಸರಿಡಲಾಗಿದೆ . ಉದ್ಯಮಿ ಭುವನೇಂದ್ರ ಕಿದಿಯೂರು ಅವರು ಎರಡೂ ಮನೆಗಳಿಗೆ ತಲಾ ಐದು ಕುರ್ಚಿಗಳನ್ನು ನೀಡಿ ಶುಭ ಕೋರಿದರು .ಆಸರೆ ಟ್ರಸ್ಟ್ ನ ರಾಘವೇಂದ್ರ ಕಿಣಿ , ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ವಿಷ್ಣು ಆಚಾರ್ಯ , ಕೃಷ್ಣ ಭಟ್ , ಕಲ್ಯಾಣಪುರ ಗ್ರಾ ಪಂ ಅಧ್ಯಕ್ಷ ಕೃಷ್ಣ ದೇವಾಡಿಗ , ಗಣೇಶ ಕುಲಾಲ್ ವೀಣಾ ನಾಯ್ಕ್ ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಮಂಗಳೂರು ಮಾಜಿ ಮೇಯರ್ ಗಣೇಶ ಹೊಸ ಬೆಟ್ಟು ,ಅಪ್ಪು ಜತ್ತನ್ , ಮೊದಲಾದವರಿದ್ದರು .ಶಾಸಕ ರಘುಪತಿ ಭಟ್ಟರ ಮಾರ್ಗದರ್ಶನದಲ್ಲಿ ಮನೆಗಳ ನಿರ್ಮಾಣವಾಗಿದೆ .