ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಅರ್ಚಕರಾದ ಮಧ್ವರಾಜ ಭಟ್ ಇವರು ವಿಶ್ವಹಿಂದೂ ಪರಿಷತ್ ಪಡುಬೆಳ್ಳೆ ಘಟಕದವರೊಂದಿಗೆ ಆಯೋಜಿಸಿದ್ದ ರಾಮಭದ್ರಕ ಮಂಡಲ ಪೂಜೆಯನ್ನು ದೇವಸ್ಥಾನದ ತಂತ್ರಿಗಳಾದ ವೇ.ಮು.ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಮತ್ತು ಬಳಗದವರು ನೆರವೇರಿಸಿದರು.ಈ ಸಂದರ್ಭದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಸಂಕಲ್ಪ ಸಹಿತ ರಾಮ ತಾರಕ ಮಂತ್ರ,ಶ್ರೀ ರಾಮ ಜಪ,ಅಷ್ಟೋತ್ತರ ನಾಮ ಸಹಿತ ನಮಸ್ಕಾರ ಸೇವೆಯನ್ನು ಮಾಡುವ ಮೂಲಕ ಪಾಲ್ಗೊಂಡರು.ನಂತರ ಪೂಜೆಗಿರಿಸಿದ ರಾಮ ದೇವರ ಬೆಳ್ಳಿಯ ನಾಣ್ಯವನ್ನು ಪ್ರಸಾದ ರೂಪವಾಗಿ ನೀಡಲಾಯಿತು.