ಎಂಐಟಿ ಮಣಿಪಾಲದಲ್ಲಿ ದಾಖಲೆಯ ರಕ್ತದಾನ ಶಿಬಿರ 215 ಯೂನಿಟ್ ರಕ್ತ ಸಂಗ್ರಹ

ದಿನಾಂಕ‌ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆನೆಯ ಅಂಗವಾಗಿ ಎನ್ ಎಸ್ ಎಸ್ ಮಾಹೆ ಎಂಐಟಿ ಮಣಿಪಾಲ,ಅಭಯಹಸ್ತ ಚಾರಿಟೇಬಲ್ ಟ್ರಸ್ಟ್‌(ರಿ) ಉಡುಪಿ, ಲಯನ್ಸ್ ಕ್ಲಬ್ ಉಡುಪಿ ಚೇತನಾ, ರೋಟರಿ ಕ್ಲಬ್ ಮಣಿಪಾಲ, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ಇಂದು ಫುಡ್ ಕೋರ್ಟ್ ಎಂಐಟಿ ಮಣಿಪಾಲ‌ದಲ್ಲಿ ನಡೆದ ರಕ್ತದಾನ ಶಿಬಿರವನ್ನು ಕಮಾಂಡರ್‌ ಡಾ.ಅನಿಲ್ ರಾಣಾ ನಿರ್ದೇಶಕರು ಎಂಐಟಿ‌ ಮಣಿಪಾಲ ಇವರು ಉದ್ಘಾಟಿಸಿದರು.ಈ ಶುಭ ಸಂದರ್ಭದಲ್ಲಿ ಮಾತನಾಡಿದ ಇವರು‌ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎನ್ ಎಸ್ ಎಸ್ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳು ಆಯೋಜಿರುವ ಸ್ವಯಂಪ್ರೇರಿತ ರಕ್ತದಾನ ಶಿಬಿರ ಅತ್ಯಂತ ಮಾದರಿ ಕಾರ್ಯಕ್ರಮ ವಿದ್ಯಾಥಿಗಳು ಈ ರಕ್ತದಾನ ಶಿಬಿರ‌ ಸದುಪಯೋಗ ಪಡೆದುಕೊಂಡು ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕು ಎಂದರು.

 
 
 
 
 
 
 
 
 
 
 

Leave a Reply