ಅವೈಜ್ಞಾನಿಕ ಕೂಡು ರಸ್ತೆ – ಕೆಳಪರ್ಕಳ ದಾರಿಯ ಮಧ್ಯೆಯೇ ಕೆಟ್ಟು ನಿಂತ ಲಾರಿ

ಪರ್ಕಳ : ಇಲ್ಲಿನ ಕೆಳಪರ್ಕಳದಲ್ಲಿ ನಗರ ಸಭೆಯ ಕುಡಿಯುವ ನೀರಿನ ರೇಚಕದ ಬಳಿ ನಿನ್ನೆ ರಾತ್ರಿ ಸರಕು ತುಂಬಿದ ಲಾರಿಯೊಂದು ಅಲ್ಲಿಯೇ ಕೆಟ್ಟು ನಿಂತು ಟಿಕಾಣಿ ಹೂಡಿದೆ. ಈ ರಸ್ತೆ ಕಾಂಕ್ರೀಟ್ ರಸ್ತೆಗೆ ಕೂಡು ರಸ್ತೆಯಾಗಿದ್ದು ರಸ್ತೆಯ ತುಂಬೆಲ್ಲಾ ಹೊಂಡಗಳಿದ್ದು, ಸರಕು ತುಂಬಿದ ಲಾರಿ ಏರಲಾಗದೇ ಅಲ್ಲಿಯೇ ನಿಂತಿತ್ತು.

ಪರ್ಕಳದಿಂದ ಮಣಿಪಾಲದ ಕಡೆಗೆ ಸಂಚರಿಸುವ ವಾಹನ ಚಾಲಕರಿಗೆ ಕೂಡುರಸ್ತೆಯನ್ನು ಏರಲು ತೊಂದರೆಯಾಗುತ್ತಿದೆ. ಇದರ ಪಕ್ಕದಲ್ಲಿ ಕಾರು ಕೂಡ ಕೆಟ್ಟುನಿಂತಿದ್ದು, ಕಳೆದೆರಡು ದಿನಗಳಲ್ಲಿ ಅಲ್ಲೇ ಠಿಕಾಣಿ ಹೂಡಿದೆ. 

ಹೀಗಾಗಿ ಜಿಲ್ಲಾಡಳಿತದಿಂದ ಹೊಂಡ ಮುಚ್ಚುವ ಕಾರ್ಯ ಭರದಿಂದ ಸಾಗಬೇಕು, ಮತ್ತು ಈ ಘನ ವಾಹನವನ್ನು ಅಲ್ಲಿಂದ ತೆರವು ಮಾಡಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. 

 
 
 
 
 
 
 
 
 
 
 

Leave a Reply