ಹಡಿಲು ಕೃಷಿಭೂಮಿ ಆಂದೋಲನದ ಕಾರ್ಯಕ್ರಮ- ಕೊಡವೂರಿನಲ್ಲಿ ಸಭೆ

ಉಡುಪಿ : ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಹಡಿಲು ಕೃಷಿಭೂಮಿ ಆಂದೋಲನದ ಕಾರ್ಯಕ್ರಮವು ಕೊಡವೂರಿನಲ್ಲಿ ವಿಪ್ರಶ್ರಿ ಸಭಾಭವನ ದಲ್ಲಿ ನಡೆಯಿತು.  

ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಮಾತನಾಡಿ ಉಡುಪಿ ಕ್ಷೇತ್ರಾದ್ಯಂತ ಹಮ್ಮಿಕೊಂಡಿರುವ ಕೃಷಿ ಆಂದೋಲನದಲ್ಲಿ ಹಡಿಲು ಭೂಮಿಯನ್ನು ಕೃಷಿ ಮಾಡುವಂತೆ ಪ್ರತಿ ವಾರ್ಡಿಗೆ ಜೆಸಿಬಿ ಮುಖಾಂತರ ನೀರಿನ ತೋಡುಗಳನ್ನು ಸ್ವಚ್ಛ ಮಾಡಲು ಹಾಗೂ ಇನ್ನಿತರ ಕೆಲಸಗಳಿಗೆ ಕಳುಹಿಸಿಕೊಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. 

 ಕೊಡವೂರು ನಗರ ಸಭಾ ಸದಸ್ಯ ಕೆ. ವಿಜಯ್ ಕೊಡವೂರು ಮಾತನಾಡಿ ಕಳೆದ ಬಾರಿ ಕೊಡವೂರು ವಾರ್ಡ್ ನಲ್ಲಿ ಕೃಷಿ ಸಮಿತಿಯನ್ನು ರಚಿಸಿ ಕೃಷಿ ಮಾಡಿದ್ದು, ಈ ಬಾರಿಯೂ ಕೃಷಿ ಮಾಡಬೇಕೆಂದು ಅನೇಕ ಸಂಘ ಸಂಸ್ಥೆಗಳು ಮುಂದೆ ಬಂದಿರುತ್ತದೆ,ಎಲ್ಲಾ ಕೃಷಿಕರ ಮನೆಗೆ ತೆರಳಿ ಕೃಷಿಯನ್ನು ಮಾಡಲು ಪ್ರೋತ್ಸಾಹ ನೀಡಿ, ಅವರಿಗೆ ಬೇಕಾದ ಟ್ಯಾಕ್ಟರ್, ಕಟಾವು ಯಂತ್ರ ಹೀಗೆ ಕೃಷಿಗೆ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.

 ಸ್ಥಳೀಯ ಕೃಷಿಕರಾದ ನವೀನ್ ಶೆಟ್ಟಿ, ವಿಠ್ಠಲ್ ಶೆಟ್ಟಿ, ಅಣ್ಣಪ್ಪ ಶೆಟ್ಟಿ , ಸದಾನಂದ ಶೇರಿಗಾರ್, ಸದಾನಂದ ಬಂಗೇರ, ವಿನಯ್ ಗರ್ಡೆ, ಅರುಣ್ ರಾವ್ ಹಾಗೂ ಊರ ಪ್ರಮುಖರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply