ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ವತಿಯಿಂದ “ವಿಶ್ವ ಉದ್ಯಮ ಶೀಲತಾ ದಿನದ” ಕಾರ್ಯಕ್ರಮ

ಮಣಿಪಾಲ : ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ವತಿಯಿಂದ ನಡೆದ “ವಿಶ್ವ ಉದ್ಯಮ ಶೀಲತಾ ದಿನದ” ಕಾರ್ಯಕ್ರಮದ ಉದ್ಘಾಟನೆಯನ್ನು ಮಣಿಪಾಲದ ಪವರ್ ಸಂಸ್ಥೆಯ ಅಧ್ಯಕ್ಷೆ ತಾರಾ ತಿಮ್ಮಯ್ಯ ನೆರವೇರಿಸಿದರು.

ಬಳಿಕ ಮಾತನಾಡಿ ಜೀವನದಲ್ಲಿ ಕಷ್ಟ ಬಂದರೆ ಧೃತಿಗೆಡದೆ ಮುಂದುವರಿಯಬೇಕು ಅದರಲ್ಲೂ ಸ್ವ-ಉದ್ಯೋಗ ಕೈಗೊಳ್ಳುವಾಗ ಅಡೆತಡೆಗಳು ಬರುವುದು ಸರ್ವೆಸಾಮಾನ್ಯ ಎಂದು ತಿಳಿಸಿ ತಮ್ಮ ಸ್ವ ಉದ್ಯಮದ ಅನುಭವವನ್ನು ಹಂಚಿಕೊಂಡರು. 

ಇನ್ನೋರ್ವ ಅತಿಥಿ ಪವರ್ ಸಂಸ್ಥೆಯ ಉಪಾಧ್ಯಕ್ಷೆ ಸುವರ್ಷ ಮಾತನಾಡಿ ಉದ್ಯಮ ಶೀಲತಾ ದಿನವನ್ನು ಆಚರಿಸುವ ಮೂಲಕ ಯುವ ಉದ್ಯಮಿಗಳು ಪ್ರೇರಣೆ ಪಡೆದುಕೊಳ್ಳುವಂತಾಗಿದೆ ಎಂದು ತಿಳಿಸಿದರು. ಭಾರತೀಯ ವಿಕಾಸ ಟ್ರಸ್ಟಿನಲ್ಲಿ ತರಬೇತಿ ಪಡೆದುಕೊಂಡ ಮಹಿಳಾ ಸ್ವ-ಉದ್ಯಮಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.  

ಭಾರತೀಯ ವಿಕಾಸ ಟ್ರಸ್ಟಿನ ಮುಖ್ಯ ಕಾರ್ಯಕ್ರಮ ಸಂಯೋಜಕಿ ಎ.ಲಕ್ಷ್ಮೀಬಾಯಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿ ಭಾರತೀಯ ವಿಕಾಸ ಟ್ರಸ್ಟ್ ಸಂಸ್ಥೆಯ ಮೂಲಕ ಯುವ ಉದ್ಯಮಿಗಳಿಗೆ ಮಾರ್ಗದರ್ಶನ, ಸಹಕಾರ ಸದಾ ಲಭ್ಯವಿದೆ ಎಂದು ತಿಳಿಸಿದರು. ಮೊದಲಿಗೆ ಭಾರತೀಯ ವಿಕಾಸ ಟ್ರಸ್ಟಿನ ಹಿರಿಯ ಸಲಹೆಗಾರ ಶ್ರೀಕಾಂತ ಹೊಳ್ಳ ಸ್ವಾಗತಿಸಿದರು. ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ಪ್ರಸ್ತಾಪಿಸಿದರು. ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಗೀತಾ ರಾವ್ ವಂದಿಸಿದರು.

 
 
 
 
 
 
 
 
 
 
 

Leave a Reply