ರಾಜ್ಯಮಟ್ಟದ ಕವನ ರಚನೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಉಡುಪಿಯ ಭಾಗ್ಯಶ್ರೀ ಕಂಬಳಕಟ್ಟ

ಬೆಂಗಳೂರಿನ ಶ್ರೀ ಶಾರದಾ ಕಲಾವೇದಿಕೆಯವರು ಮೊದಲನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಕವನ ರಚನೆ ಸ್ಪರ್ಧೆಯಲ್ಲಿ ಉಡುಪಿಯ ಭಾಗ್ಯಶ್ರೀ ಕಂಬಳಕಟ್ಟ ಇವರಿಗೆ ದ್ವಿತೀಯ ಬಹುಮಾನ ಲಭಿಸಿದೆ. ಇತ್ತೀಚೆಗೆ ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ನಟ ಉಪೇಂದ್ರರವರ ಮಾತೃಶ್ರೀಯವರಾದ ಶ್ರೀಮತಿ ಅನುಸೂಯ, ಕಂಚಿ ಕಾಮಕೋಟಿ ಪೀಠಂ ಆಸ್ಥಾನ ವಿದ್ವಾನ್ ಶ್ರೀ ಆರ್. ಕೆ. ಪ್ರಸನ್ನ ಕುಮಾರ್, ಕಿರುತೆರೆ- ಹಿರಿತೆರೆ ನಟರಾದ ಶ್ರೀ ವಾಸು ಬುಕ್ಕಾಪಟ್ನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಶಾರದಾ ಕಲಾವೇದಿಕೆಯ ಸಂಸ್ಥಾಪಕರಾದ ಶ್ರೀ ಸತ್ಯ ಮಲ್ನಾಡ್, ನಿರ್ವಾಹಕರಾದ ಶ್ರೀಮತಿ ಪೂರ್ಣಿಮ ಭಟ್, ಶ್ರೀಮತಿ ರಾಧಾ ಶಾನುಭೋಗ್, ಶ್ರೀಮತಿ ಪಲ್ಲವಿ ಭಟ್, ಶ್ರೀ ಕೇಶವ್ ಹೆಬ್ಬಾರ್ ಮತ್ತು ಶ್ರೀ ಶರತ್ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply