ಮುಲ್ಕಿ – ಅಪಘಾತ ತಪ್ಪಿಸಲು ಹೋಗಿ ಕಾರ್ ಪಲ್ಟಿ‌ : ಓರ್ವ ಸಾವು : ಇಬ್ಬರಿಗೆ ಗಾಯ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಕ್ಷೀರಸಾಗರದ ಬಳಿ ಕಾರು ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ್ದರೆ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ಸೆ.27ರ ಸಂಜೆ ಸಂಭವಿಸಿದೆ.

ಮೃತ ಯುವಕನನ್ನು ಪಕ್ಷಿಕೆರೆ ಪಂಜ ನಿವಾಸಿ ರಘುನಾಥ್ ಪೂಜಾರಿ (40) ಹಾಗೂ ಗಾಯಾಳುಗಳನ್ನು ಮುಲ್ಕಿ ಸಮೀಪದ ಮಟ್ಟು ನಿವಾಸಿ ಹಿಮಕರ ಮತ್ತು ಕಾರ್ತಿಕ್ (ಕೇಶವ ಪಂಜ) ಎಂದು ಗುರುತಿಸಲಾಗಿದೆ.

ಮೃತ ರಘುನಾಥ್ ತನ್ನ ಮಿತ್ರರಾದ ಹಿಮಕರ ಮಟ್ಟು ಮತ್ತು ಕೆಮ್ರಾಲ್ ಗ್ರಾ.ಪಂ. ಸದಸ್ಯ ಕಾರ್ತಿಕ್ (ಕೇಶವ ಪಂಜ) ರೊಂದಿಗೆ ಕಾರಿನಲ್ಲಿ ಮುಲ್ಕಿಯಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದರು.

ಕ್ಷೀರಸಾಗರ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ನಡುವೆ ಏಕಾಏಕಿ ಬೈಕ್‌ವೊಂದು ಕ್ರಾಸ್ ಮಾಡುತ್ತಿದ್ದ ವೇಳೆ ಅಪಘಾತ ತಪ್ಪಿಸಲು ಯತ್ನಿಸಿ ಕಾರಿನ ಚಾಲಕ ಬ್ರೇಕ್ ಹಾಕಿದ್ದು, ಈ ಸಂದರ್ಭ ಕಾರು ಡಿವೈಡರ್ ಮೇಲೇರಿ ಮಂಗಳೂರಿನಿಂದ ಉಡುಪಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿ ಬಿದ್ದಿದೆ.

ಅಪಘಾತದ ರಭಸಕ್ಕೆ ಕಾರಿನಲ್ಲಿ ಎದುರಿನಲ್ಲಿ ಕುಳಿತಿದ್ದ ರಘುನಾಥ್ ಸ್ಥಳದಲ್ಲಿಯೇ ಮತಪಟ್ಟಿದ್ದಾರೆ. ಉಳಿದಂತೆ ಅಪಘಾತದಲ್ಲಿ ಚಾಲಕ ಕಾರ್ತಿಕ್ ಹಾಗೂ ಹಿಮಕರ ಮಟ್ಟು ಸಹಿತ ಇಬ್ಬರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.

ಅಪಘಾತದಿಂದ ಹೆದ್ದಾರಿಯಲ್ಲಿ ರಕ್ತದೋಕುಳಿ ಹರಿದಿದ್ದು ಮೃತ ರಘುನಾಥ ಪೂಜಾರಿಯ ತಲೆ ಸಂಪೂರ್ಣ ಜಖಂಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ‌. ಮೃತ ರಘುನಾಥ ಪೂಜಾರಿ ಪಕ್ಷಿಕೆರೆ ಪರಿಸರದಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದು ಎಲ್ಲರೊಂದಿಗೆ ಉತ್ತಮವಾದ ಒಡನಾಟ ಹೊಂದಿದ್ದರು ಎನ್ನಲಾಗಿದೆ.

ಸುರತ್ಕಲ್ ಟ್ರಾಫಿಕ್ ಇನ್ಸ್ ಪೆಕ್ಟರ್ ಶರೀಫ್, ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಪಘಾತದ ವಾಹನವನ್ನು ತೆರವುಗೊಳಿಸಿದ್ದಾರೆ.

 
 
 
 
 
 
 
 
 
 
 

Leave a Reply