ತಾಲೂಕು ಮಟ್ಟದ ಭರತನಾಟ್ಯ ಸ್ಪರ್ಧೆ

ತಾಲೂಕು ಮಟ್ಟದ ಭರತನಾಟ್ಯ ಸ್ಪರ್ಧೆ ತಾಲೂಕು ಬ್ರಾಹ್ಮಣ ಮಹಾಸಭಾ ರಜತ ಮಹೋತ್ಸವ ಪ್ರಯುಕ್ತ ಮತ್ತು ಪುತ್ತೂರು ಬ್ರಾಹ್ಮಣ ಮಹಾಸಭಾದ 19 ನೇ ವಾರ್ಷಿಕೋತ್ಸವದಂದು ಜಂಟಿ ಆಶ್ರಯದಲ್ಲಿ 30/7/2023 ಭಾನುವಾರದಂದು ಯಶಸ್ವಿಯಾಗಿ ನಡೆಯಿತು ಈ ಕಾರ್ಯಕ್ರಮದಲ್ಲಿ ಪುತ್ತೂರು ಬ್ರಾಹ್ಮಣ ಮಹಾಸಭಾ ಗೌರವಾಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಮತ್ತು ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಮಂಜುನಾಥ ಉಪಾಧ್ಯಾಯರು ಕಾರ್ಯಕ್ರಮ ಉದ್ಘಾಟಿಸಿದರು ಅಧ್ಯಕ್ಷರಾದ ಕೆ ದುರ್ಗಾ ಪ್ರಸಾದ್ ಭಾರ್ಗವ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಕಾರ್ಯದರ್ಶಿಗಳಾದ ಜಿವಿ ಆಚಾರ್ಯ ಹಾಗೂ ಕೋಶಾಧಿಕಾರಿಗಳಾದ ರಾಮಚಂದ್ರ ಆಚಾರ್ಯ, ಆಪತ್ಬಾಂಧವ ಸಮಿತಿಯ ಸಂಚಾಲಕರಾದ ಸುಬ್ರಮಣ್ಯಉಡುಪರು ಕಾರ್ಯಕ್ರಮ ಆಯೋಜಿಸಿದರು ತೀರ್ಪುಗಾರರಾಗಿ ಶ್ರೀಮತಿವೀಣಾ ಮುರುಳಿಧರ್ ಸಮಗ, ಶ್ರೀಮತಿ ರಶ್ಮಿ ಕಲ್ಕೂರ, ಶ್ರೀಮತಿ ಶ್ರೀ ವಿದ್ಯಾ ಸಂದೇಶ್ ಮತ್ತು ಕುಮಾರಿ ಚೈತನ್ಯ ರವರು ಉಪಸ್ಥಿತರಿದ್ದರು ಈ ಕಾರ್ಯಕ್ರಮ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಪುತ್ತೂರು ಬ್ರಾಹ್ಮಣ ಮಹಾಸಭಾ ಕಾರ್ಯಕಾರಿ ಸಮಿತಿಯ ಸದಸ್ಯರ ಸಹಾಯಕದೊಂದಿಗೆ ಯಶಸ್ವಿಯಾಗಿ ನಡೆಯಿತು

 
 
 
 
 
 
 
 
 
 
 

Leave a Reply