ಚೇತನ ಪೌಂಡೇಶನ ಬೆಂಗಳೂರು ಇವರು ನೀಡಲಿರುವ, ಕರುನಾಡ ಚೇತನ ರಾಜ್ಯ ಪ್ರಶಸ್ತಿಗೆ ಯುವ ಗಾಯಕಿ ಕುಮಾರಿ ಅಶ್ವಿನಿ ಕಂಚಿನಡ್ಕ ಪಡುಬಿದ್ರಿ ಇವರು ಆಯ್ಕೆ ಆಗಿದ್ದಾರೆ.
ಆಗಸ್ಟ್ 13 ರಂದು ಕುವೆಂಪು ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ, ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ್ ಮಾಡಲಗೆರೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.