ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಶಿವಾನಿ ಶೆಟ್ಟಿ ಪ್ರಥಮ

ಉಡುಪಿ: ಭಾರತ ಸರಕಾರ , ಆಯುಷ್ ಸಚಿವಾಲಯದ ಯೋಗ ಪ್ರಶಸ್ತಿ ಪತ್ರ ಸಂಸ್ಥೆಯ ಸದ್ಯಸ್ಯ ಯೋಗ ಗುರು ಕೆ. ನರೇಂದ್ರ ಕಾಮತ್ ರವರ ಶಿಷ್ಯೆ ಉಡುಪಿ ವಿದ್ಯೋದಯ ಆಂಗ್ಲ ಮಾಧ್ಯಮ  ಶಾಲೆಯ 4 ನೇ ತರಗತಿಯಲ್ಲಿ ವ್ಯಾಸಂಗ  ಮಾಡುತ್ತಿರುವ ವಿದ್ಯಾರ್ಥಿನಿ ಹೆಬ್ರಿಯ ಶೀಮತಿ ಸುಜಾತಾ ಶೆಟ್ಟಿ ಮತ್ತು ಶಿವಾನಂದ ಶೆಟ್ಟಿಯವರ ಸುಪುತ್ರಿ ಶಿವಾನಿ ಶೆಟ್ಟಿ  ಭಾರತ ಸರ್ಕಾರ ನಡೆಸುವ ಅಂಡಮಾನ್ ನಿಕೋಬಾರ್ ದ್ವೀಪದ ಆರ್ ಜಿ ಟಿ  ಪಬ್ಲಿಕ್ ವಿದ್ಯಾಲಯದಲ್ಲಿ ನಡೆದ 6ನೇ  ರಾಷ್ತ್ರೀಯ ಯೋಗಾಸನ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನವನ್ನು ಗಳಿಸಿ ಅಂತರ್ ರಾಷ್ತ್ರೀಯ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾಳೆ .

ಸದಾ ಲವಲವಿಕೆಯಿಂದಿರುವ ಈಕೆ ಕಲಿಸಿದ ಯಾವುದೇ ಆಸನ ಕೂಡಲೇ ಕರಗತ ಮಾಡಿಕೊಳ್ಳುತ್ತಾಳೆ. ಈಕೆ ತನ್ನ ದೇಹವನ್ನು ಇಲಾಸ್ಟಿಕ್ ನಂತೆ ಬಾಗಿಸುವ ಸಾಮರ್ಥ್ಯ ಹೊಂದಿದ್ದಾಳೆ. ಇವಳಿಗೆ ಭವಿಷ್ಯದಲ್ಲಿ ಯೋಗ ವಿಜ್ಞಾನಿಯಾಗಿ ಜನರ ಸೇವೆ ಮಾಡುವ ಬಯಕೆ.

ಪರಮಪೂಜ್ಯ ಕಾಣಿಯೂರ್ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಶಿವಾನಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ, ಧನಾತ್ಮಕ ಬೆಂಬಲ ಕೂಡಾ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಅಂತೆಯೇ ಗುರುಗಳಾದ ನರೇಂದ್ರ ಕಾಮತ್ ರವರು ನಿನು ಹಾಕಿಕೊಂಡಿರುವ ಗುರಿಯನ್ನು ಮುಟ್ಟುವವರೆಗೆ ನಾನೂ ಕೂಡಾ ವಿರಮಿಸು ವುದಿಲ್ಲ ಎಂಬ ಭರವಸೆಯ ನುಡಿಯನ್ನು ಹೇಳಿದ್ದರು.

ಈಗಾಗಲೇ ಶಿವಾನಿಯವರನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದ್ದಾರೆ.  

 
 
 
 
 
 
 
 
 
 
 

Leave a Reply