ಮೈಸೂರು: ಕೃಷ್ಣಧಾಮದಲ್ಲಿ 22ರಂದು ಯಕ್ಷಗಾನ ಪ್ರದರ್ಶನ

ಮೈಸೂರು: ನಗರದ ಸರಸ್ವತಿ ಪುರಂನ ಶ್ರೀ ಕೃಷ್ಣಧಾಮದಲ್ಲಿ ನ.22ರಂದು ಸಂಜೆ ೫ಕ್ಕೆ ಶ್ರೀ ಕೃಷ್ಣ ತಾತ್ಪರ್ಯ ಯಕ್ಷವೃಂದ ಸಂಸ್ಥೆ ವಿಶೇಷ ಯಕ್ಷಗಾನ ಪ್ರದರ್ಶನ ಆಯೋಜಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅತಿಥಿ ಕಲಾವಿದರು ಗಣೇಶ ಕೊಲೆಕಾಡಿ ವಿರಚಿತ `ಭಕ್ತ ಸುಧಾಮ’ ಮತ್ತು ವಿದ್ವಾನ್ ಕೃಷ್ಣಕುಮಾರ ವಿರಚಿತ `ಗೋವರ್ಧನೋದ್ಧರಣ’ ಎಂಬ ಭಕ್ತಪ್ರಧಾನ ಯಕ್ಷ ಪ್ರಸಂಗವನ್ನು ಪ್ರಸ್ತುತಪಡಿಸಲಿದ್ದಾರೆ.
ಹಿಮ್ಮೇಳದಲ್ಲಿ ಭಾಗವತರಾಗಿ ತಲಪಾಡಿ ದೇವಿಪ್ರಸಾದ ಆಳ್ವ, ಚಂಡೆಯಲ್ಲಿ ಕೌಶಲ್ ರಾವ್ ಮತ್ತು ಮದ್ದಳೆಯಲ್ಲಿ ಸತ್ಯಜಿತ್ ರಾಮ್ ಸಹಕಾರ ನೀಡಲಿದ್ದಾರೆ. ಮುಮ್ಮೇಳದಲ್ಲಿ ಅಮ್ಮುಂಜೆ ಮೋಹನ ಕುಮಾರ್, ಬಾಲಕೃಷ್ಣ ಮಣಿಯಾಣಿ, ಅರುಣ್ ಕೋಟ್ಯಾನ್,ಲಕ್ಷ್ಮಣ  ಮರಕಡ, ಮಹೇಶ ಸಾಣೂರು ಮತ್ತು ತುಂಬೆ ಚಂದ್ರಹಾಸ ಅಭಿನಯಿಸಲಿದ್ದಾರೆ.
ಕೃಷ್ಣಧಾಮದ ವಾಯು ಪ್ರಭವ ಸಭಾಂಗಣದಲ್ಲಿ ನಡೆಯಲಿರುವ ಈ ಪ್ರದರ್ಶನಗಳಿಗೆ ಪ್ರವೇಶ ಉಚಿತ ಎಂದು ಶ್ರೀ ಕೃಷ್ಣ ತಾತ್ಪರ್ಯ ಯಕ್ಷವೃಂದ ಅಧ್ಯಕ್ಷ ಕೃಷ್ಣಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವರಗಳಿಗೆ 861447050 ಸಂಪರ್ಕಿಸಬಹುದು.
 
 
 
 
 
 
 
 
 
 
 

Leave a Reply