ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ ದಿಂದ ಶ್ರೀಮತಿ ವನಿತಾ ಕಿಣಿಯವರಿಗೆ ಸನ್ಮಾನ

ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ, ಉಡುಪಿ ಘಟಕದ ವಿಶೇಷ ಮಾಸಿಕ ಸಭೆಯು ಮಾರ್ಚ್ 12ರಂದು ಸಿಂಡಿಕೇಟ್ ಟವರ್ಸ್, ಕೆಥೋಲಿಕ್ ಸೆಂಟರಿನಲ್ಲಿ ಜರಗಿತು.

ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಡೆದ ಈ ಸಭೆಯಲ್ಲಿ ಶ್ರೀಮತಿ ಡಾI ಮಾಧವಿ ಭಂಡಾರಿ,ನಿವೃತ್ತ ಪ್ರಾಂಶುಪಾಲರು, ಪೂರ್ಣ ಪ್ರಜ್ಞಾ ಸಂಧ್ಯಾ ಕಾಲೇಜು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಂಗೀತದಲ್ಲಿ ವಿಶೇಷ ಸಾಧನೆ ಗೈದು ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ವಿಶಾರದ ಪೂರ್ಣ ಪರೀಕ್ಷೆ ಯಲ್ಲಿ ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣರಾದ ಶ್ರೀಮತಿ ವನಿತಾ ಕಿಣಿ ಇವರ ಕಠಿಣ ಪರಿಶ್ರಮ ಹಾಗೂ ಸಾಧನೆಗಾಗಿ ಅಭಿನಂದಿಸಲಾಯಿತು.

ಸಂಘಟನೆಯ ಆಜೀವ ಸದಸ್ಯ ಶ್ರೀ ಪಿ ಜಯರಾಂ ನಾಯಕ್ ಇವರನ್ನು ಜೀವನದ 75 ವರುಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.

ಮುಖ್ಯ ಅತಿಥಿ ಡಾI ಮಾಧವಿ ಭಂಡಾರಿ ಯವರು ವಿಶ್ವ ಮಹಿಳಾ ದಿನದ ಸಂದರ್ಭದಲ್ಲಿ 57ನೆಯ ವಯಸ್ಸಿ ನಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ವಿಶಿಷ್ಠ ಸಾಧನೆ ಗೈದ ಶ್ರೀಮತಿ ವನಿತಾ ಕಿಣಿ ಯವರು ಮಹಿಳೆಯರಿಗೊಂದು ಮಾದರಿ ಎಂದು ಶ್ಲಾಘಿಸಿದರು. ಸಮಾನತೆಯ ಈ ದಿನಗಳಲ್ಲಿ ಸಹ ಅಸಂಘಟಿತ ವಲಯದಲ್ಲಿ ಕಾಣುವ ತಾರತಮ್ಯ ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಉಡುಪಿ ಘಟಕದ ಅಧ್ಯಕ್ಷ ಶ್ರೀ ಪ್ರದೀಪ ಆರ್ ಭಕ್ತ, ಅಧ್ಯಕ್ಷ ಸ್ಥಾನ ವಹಿಸಿದ್ದರು ಪದಾಧಿಕಾರಿಗಳು ಹಾಗೂ ಸದಸ್ಯರು, ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

ಶ್ರೀಮತಿ ಸುಮಾ ಗಾಂವ್ಕರ್ ಸ್ವಾಗತಿಸಿ ಮುಖ್ಯ ಅತಿಥಿ ಯನ್ನು ಪರಿಚಯಿಸಿದರು.ಶ್ರೀಮತಿ ವೈಜಯಂತಿ ಕಾಮತ್ ರವರು ಶ್ರೀಮತಿ ವನಿತಾ ಕಿಣಿ ಯವರು ಸಂಗೀತದಲ್ಲಿ ಸಾಗಿಬಂದ ದಾರಿಯನ್ನು ವಿವರಿಸಿದರು. ಶ್ರೀಮತಿ ಪಿ. ಸಂಧ್ಯಾ ನಾಯಕ್ ರವರು ಶ್ರೀ ಪಿ ಜಯರಾಮ ನಾಯಕರ ಪರಿಚಯವಿತ್ತರು. ಶ್ರೀಮತಿ ಸುಮತಿಕೃಷ್ಣ ರವರು ವಂದಿಸಿದರು.ಶ್ರೀಮತಿ ಸಂಧ್ಯಾ ರಮೇಶ್ ರವರು ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply