ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ ಹಾಗು ಉಡುಪಿ ಜಿಲ್ಲೆ, ಉಡುಪಿ ವಲಯದ ವಾರ್ಷಿಕ ಸಭೆಯ ನಿಮಂತ್ರಣ ಪತ್ರಿಕೆಯನ್ನು ಜಿಲ್ಲಾಧ್ಯಕ್ಷ ಆನಂದ್ ಎನ್ ಕುಂಪಲ ಶನಿವಾರದಂದು ಉಡುಪಿ ಜಗನ್ನಾಥ ಸಭಾಭವನದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು, ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ಶ್ರೀನಿವಾಸ ಐತಾಳ್, ರಾಜೇಶ್ ತೊಕ್ಕೊಟ್ಟು, ಸುರಭಿ ಸುಧೀರ್ ಶೆಟ್ಟಿ, ಪ್ರವೀಣ್ ಕೊರೆಯ, ದಿವಾಕರ್ ಹಿರಿಯಡ್ಕ, ವಾಮನ ಪಡುಕರೆ, ಸುಂದರ ಪೂಜಾರಿ ಕೊಳಲಗಿರಿ ಉಪಸ್ಥಿತರಿದ್ದರು.