ಸರ್ವ ಸದಸ್ಯರು ತಮ್ಮ ಕುಟುಂಬವನ್ನು ಪ್ರೀತಿಸಿದಷ್ಟೇ ಸಮನಾಗಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಷಿಯೇಶನ್ ಸಂಘಟನೆಯನ್ನು ಪ್ರೀತಿಸಿ ಸಂಘಟನೆಗಾಗಿ ಮಾಡಿದ ತ್ಯಾಗ ದುಡಿದ ಫಲ ಇಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ರೂಪದಲ್ಲಿ ನಮಗೆ ದೊರೆತಿದೆ. ಸದಸ್ಯರೆಲ್ಲರೂ ಒಟ್ಟಾಗಿ ಸಂಭ್ರಮಿ ಸುವ ಭಾಗ್ಯ ನಮಗೆ ಒದಗಿ ಬಂದಿದೆ.
ಈ ಸಂತೋಷದ ಜೊತೆಗೆ ಪ್ರಶಸ್ತಿಯ ಹಿಂದೆ ಅಡಕವಾಗಿರುವ ಕೆಲವೊಂದು ವಿಚಾರಗಳನ್ನು ನೆನಪಿಸಿಕೊಳ್ಳಲೇಬೇಕಾಗಿದೆ. ನಮ್ಮ ಎಸ್ ಕೆಪಿಎ ಉಡುಪಿ ವಲಯದ ಆರಂಭದಿಂದ ಇಂದಿನವರೆಗೂ ನಮ್ಮ ಸಂಘಟನೆಯನ್ನು ಮುನ್ನಡೆಸಿದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು,ಸಲಹಾ ಸಮಿತಿಯ ಸದಸ್ಯರು ಹಾಗೂ ಸಾರ್ವಕಾಲಿಕ ವಾಗಿ ಸಂಘಟನೆಗೆ ಭೀಮಬಲ ತುಂಬಿದ ಸದಸ್ಯರು ಇವರೆಲ್ಲರ ಜೊತೆಗೆ ನಮ್ಮ ವಲಯದ ಹಂಬಲಕ್ಕೆ ಬೆಂಬಲ ನೀಡಿದ ಸರ್ವಧರ್ಮದ ದಾನಿಗಳನ್ನು ಮರೆಯದೇ ನೆನಪಿಸಿಕೊಳ್ಳ ಬೇಕಾದದ್ದು ನಮ್ಮ ಧರ್ಮ.
ಮರವೊಂದರ ಫಲವನ್ನು ಸವಿಯುವಾಗ ನೆಲ ದೊಳಗಿನ ಜಲ, ಸಾರವನ್ನು ಹೀರಿಕೊಂಡು ತುತ್ತ ತುದಿಯಲ್ಲಿರುವ ಹಣ್ಣಿಗೆ ರುಚಿ ಸತ್ವವನ್ನು ಕೊಟ್ಟ ಬೇರನ್ನು ಮರೆಯಲಾದೀತೇ?.
ಯಾವನೇ ಒಬ್ಬ ವ್ಯಕ್ತಿ ಅಥವಾ ಸಂಘಟನೆಗೆ ಪ್ರಶಸ್ತಿ ಸಲ್ಲಬೆಕಾದರೆ ಹಲವಾರು ವರುಷಗಳ ಸಾಧನೆ, ತ್ಯಾಗ, ಸೇವೆ ಎಲ್ಲವೂ ಮಾನದಂಡ ಗಳಾಗುತ್ತವೆ.
ನಮ್ಮ ಸಂಘಟನೆಯ ತ್ಯಾಗ, ಸಮಾಜಸೇವೆ ಎಲ್ಲವೂ ಸರಕಾರದ ಗಮನಸೆಳೆದಿದೆ ಎಂಬುದು ಸಂತೋಷದ ಸಂಗತಿ. ಈ ಪ್ರಶಸ್ತಿ ನಮ್ಮ ಸಂಘಟನೆಗೊಂದು ಗೌರವದ ಗರಿ.
ಮತ್ತೊಮ್ಮೆ ಇತರ ಸಂಘ ಸಂಸ್ಥೆಗಳು ನಮ್ಮತ್ತ ಕತ್ತು ತಿರುಗಿಸಿ ನೋಡುವಂತಾಗಿದೆ. ಛಾಯಾ ಗ್ರಾಹಕರ ಕಾರ್ಯ ಶೈಲಿಯನ್ನು ಅನುಕರಿಸು ವಂತಾಗಿದೆ.
ಪ್ರಶಸ್ತಿ ದೊರಕಿದ ಸಂದರ್ಭದಲ್ಲಿ ಉಡುಪಿ ವಲಯದ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿರುವ ಜನಾರ್ದನ್ ಕೊಡವೂರು ಮತ್ತು ಅವರ ತಂಡ ಹಾಗೂ ಸರ್ವ ಸದಸ್ಯರು ಅಭಿನಂದನೆಗೆ ಪಾತ್ರರು. ಜೈ S.K.P.A.