ಕರ್ನಾಟಕ ಸಂಗೀತದ ಹಿರಿಯ ವಿದ್ವಾಂಸ, ಸಂಗೀತ ಗುರು, ಕಾಸರಗೋಡಿನ ಕಲ್ಮಾಡಿ ಶ್ರೀ ಸದಾಶಿವ ಆಚಾರ್ಯ ಇವರನ್ನು ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ನಂತರ ಅವರ ಸಂಗೀತ ಕಛೇರಿ ನಡೆಯಿತು. ವಯೊಲಿನ್ ನಲ್ಲಿ ಶ್ರೀ ಪೂರ್ಣಪ್ರಜ್ಞ ಹಾಗೂ ಮೃದಂಗದಲ್ಲಿ ಶ್ರೀ ಬಾಲಚಂದ್ರ ಭಾಗವತ್ ಸಹಕರಿಸಿದರು. ಕಾರ್ಯಕ್ರಮದ ಮೊದಲು ಕುಮಾರಿ ಮನಸ್ವಿನಿ ಹಾಗೂ ಕುಮಾರಿ ಸ್ವಸ್ತಿ ಎಂ. ಭಟ್ ಇವರ ಹಾಡುಗಾರಿಕೆ ನಡೆಯಿತು.