ರೋಟರಿ ಉದ್ಯಾವರ ಪದಪ್ರದಾನ, ಸನ್ಮಾನ

ಉದ್ಯಾವರ ರೋಟರಿ ಕ್ಲಬ್ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಜುಲೈ 15ರಂದು ಜರಗಿತು. ಮಾಜಿ ಸಹಾಯಕ ಗವರ್ನರ್ ಡಾ. ಎ ಗಣೇಶ್ ಅವರು ನೂತನ ಅಧ್ಯಕ್ಷ ನಾಗೇಶ್ ಸಿ.ಹೆಚ್. ಮತ್ತು ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ಉದ್ಯಾವರ ಆಸುಪಾಸಿನಲ್ಲಿ ಸಮಾಜಸೇವೆಯಲ್ಲಿ ಗುರುತಿಸಿಕೊಂಡ, ಕೊವಿಡ್ ಸಂದಿಗ್ಧತೆಯ ಈ ಸಂದರ್ಭದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಧೈರ್ಯತುಂಬಿ ಶವ ಸಂಸ್ಕಾರಕ್ಕೆ ತಾನೇ ಮುತುವರ್ಜಿವಹಿಸುತ್ತಿರವ, ಸಾರ್ವಜನಿಕ ಹಿಂದೂ ರುದ್ರಭೂಮಿ ಉದ್ಯಾವರ ಇದರ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿರುವ ಕೊವಿಡ್ ವಾರಿಯರ್ ಗಿರೀಶ್ ಕುಮಾರ್ ಉದ್ಯಾವರ ಅವರ ಶ್ಲಾಘನೀಯ ಈ ಸೇವೆಗಾಗಿ ಸನ್ಮಾನಿಸಲಾಯಿತು.

ರೋಟರಿ ಸಹಾಯಕ ಗವರ್ನರ್ ಡಾ. ಕೆ. ಸುರೇಶ್ ಶಣೈ ರೋಟರಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ವಲಯ ಸೇನಾನಿ ಉಮೇಶ್ ರಾವ್ ಹಾಗೂ ರೋಟರಿಯ ಆನಂದ್ ಉದ್ಯಾವರ್, ಗುರುಪ್ರಸಾದ್ ಕಾಮತ್, ವಸಂತ ಕೋಟ್ಯಾನ್ ಉಪಸ್ಥಿತರಿದ್ದರು.

ನಿರ್ಗಮನ ಅಧ್ಯಕ್ಷ ರೊ| ದೀಕ್ಷಿತ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಸತೀಶ್ ವಂದಿಸಿದರು. ರಾಜೇಶ್ ಪಾಲನ್, ಗಿರಿರಾಜ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply