ನೀಲಾವರ ಗೋಶಾಲೆಗೆ ರೂ. 50,000.00 ಕೊಡುಗೆ

ಗೋವಿಂದ ಕಲ್ಯಾಣ ಮಂಟಪದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ನಡೆದ ಪೇಜಾವರ ಶ್ರೀಗಳ 60ರ ಅಭಿನಂದನಾ  ಸಮಾರಂಭದಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಪೇಜಾವರ ಶ್ರೀಗಳ ಆಶ್ರಯದಲ್ಲಿ ನಡೆಯುತ್ತಿರುವ ನೀಲಾವರ ಗೋಶಾಲೆಗೆ ರೂ. 50,000.00 ನೀಡುವ ಮೂಲಕ ಶ್ರೀಪಾದರನ್ನು ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.
 ದಾನಿ ಶ್ರೀಕಾಂತ ಎಂ.ಜಿ. ಬೆಂಗಳೂರು ಇವರಿಂದ ರೂ. 25,000, ಇದರೊಂದಿಗೆ ಬ್ರಾಹ್ಮೀ ಸಭಾಭವನದ ಗೋಗ್ರಾಸ ಹುಂಡಿಯಲ್ಲಿ  ಮತ್ತು ವಿಟ್ಲಪಿಂಡಿ ಮಹೋತ್ಸವದಂದು ಮಜ್ಜಿಗೆ ವಿತರಣೆ ಸಂದರ್ಭದಲ್ಲಿ ಶೇಖರಣೆಯಾದ ಹಣವನ್ನು ಒಟ್ಟು ಮಾಡಿ ನೀಡಲಾಗಿದೆ ಎಂದು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚೈತನ್ಯ ಎಂ.ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ
 
 
 
 
 
 
 
 
 
 
 

Leave a Reply