ನೂತನ ಕರವೇ ಕಾರ್ಯಕರ್ತರ ಸೇರ್ಪಡೆ ಮತ್ತು ಅಭಿನಂದನಾ ಸಮಾರಂಭ

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕದ ವತಿಯಿಂದ ನಡೆದ ನೂತನ ಕರವೇ ಕಾರ್ಯಕರ್ತರ ಸೇರ್ಪಡೆ ಮತ್ತು ಅಭಿನಂದನಾ ಸಮಾರಂಭವು ಹೋಟೆಲ್ ಕಿದಿಯೂರು ವಾಸುಕಿ ಸಭಾಂಗಣದಲ್ಲಿ ಜರುಗಿತು.

ತಾಲೂಕು ಘಟಕವನ್ನು ಅಧ್ಯಕ್ಷ ಅ ರಾ ಪ್ರಭಾಕರ ರಾಜ್ ಪೂಜಾರಿ ಸಮರ್ಥವಾಗಿ ಮುನ್ನಡೆಸಲು ಅರ್ಹರು ಎಂದು ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಆಯ್ಕೆ ಮಾಡಿ ಒಂದು ವರ್ಷ ಸಮೀಪಿಸುತ್ತಿದೆ. ಈ ಸಂಧರ್ಬದಲ್ಲಿ ತಾಲೂಕು ಘಟಕವನ್ನು ಇನ್ನಷ್ಟು ಬಲ ಪಡಿಸುವ ಹಂಬಲದೊಂದಿಗೆ ಹಲವಾರು ನೂತನ ಕಾರ್ಯಕರ್ತರ ಸೇರ್ಪಡೆಯ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಸಮಾರಂಭದಲ್ಲಿ ಪ್ರಮುಖರಾದ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಜ್ಯೋತಿ ಗಿರೀಶ್ ಪೂಜಾರಿ, ವಿಶ್ವನಾಥ ರೆಡ್ಡಿ ಬಿರಾದಾರ್, ಕುಮಾರ್ ಪ್ರಸಾದ್, ವಿಠ್ಠಲ್ ಗೌಡರ್, ಮಹೇಶ್ ಗುಂಡಿಬೈಲು, ಆನಂದ್, ಮೊದಲಾಗಿ ಹಲವಾರು ಕನ್ನಡಾಭಿಮಾನಿಗಳು ಸೇರ್ಪಡೆಗೊಂಡರು.

ಸಮಾರಂಭದ ಅಧ್ಯಕ್ಷತೆಯನ್ನು ಕರವೇ ಜಿಲ್ಲಾ ಉಪಾಧ್ಯಕ್ಷ ಕುಶಾಲ್ ಅಮೀನ್ ವಹಿಸಿದ್ದರು, ಪ್ರಾಸ್ತಾವಿಕವಾಗಿ ತಾಲೂಕು ಅಧ್ಯಕ್ಷ ಅ ರಾ. ಪ್ರಭಾಕರ್ ರಾಜ್ ಪೂಜಾರಿ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಜ್ಯೋತಿ ಗಿರೀಶ್ ಪೂಜಾರಿ,ವಿಶ್ವನಾಥ ರೆಡ್ಡಿ ಬಿರಾದಾರ್,ಬಾಗವಹಿಸಿದ್ದರು,ತಾಲೂಕು ಮಹಿಳಾ ಅಧ್ಯಕ್ಷೆ ಮಮತಾ ನಾಯಕ್ ಉಪಸ್ಥಿತಿಯೊಂದಿಗೆ 25 ಕ್ಕಿಂತಲೂ ಹೆಚ್ಚು ಜನರನ್ನು ತಾಲೂಕು ಘಟಕಕ್ಕೆ ಪ್ರಮುಖರ ಸಮ್ಮುಖದಲ್ಲಿ ಸೇರ್ಪಡೆಗೊಳಿಸಲಾಯಿತು.

ನೂರಾರು ಕನ್ನಡಾಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಜಯಚಿತ್ರಾ ಸ್ವಾಗತಿಸಿ,ಅನುಷಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು, ಜಿಲ್ಲಾ ಕಾರ್ಯದರ್ಶಿ ಅವಿನಾಶ್ ಶೆಟ್ಟಿ ವಂದನೆಗೈದರು.

 
 
 
 
 
 
 
 
 
 
 

Leave a Reply