ಕಾಬೆಟ್ಟು ಪ್ರೌಢಶಾಲೆಯಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯಿಂದ ಪ್ರತಿಭಾ ಪುರಸ್ಕಾರ

ಕಾರ್ಕಳ ತಾಲೂಕಿನ ಕಾಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ಉಡುಪಿ ಜಿಲ್ಲಾಮಟ್ಟದ ಯೂತ್ ಫಾರ್ ಸೇವಾ ಸಂಸ್ತೆಯ ವತಿಯಿಂದ ವಿವಿಧ ಸರಕಾರಿ ಪ್ರೌಢ ಶಾಲೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಜರುಗಿತು. ಒಟ್ಟು 13 ಸರಕಾರಿ ಪ್ರೌಢಶಾಲೆಗಳ 94 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಪುರಸ್ಕಾರಗಳನ್ನು ಪುಸ್ತಕ ರೂಪದಲ್ಲಿ ವಿತರಣೆ ಮಾಡಲಾಯಿತು.

ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಯೂತ್ ಫಾರ್ ಸೇವಾ ಜಿಲ್ಲಾ ನಿರ್ದೇಶಕಿ ರಮಿತ ಶೈಲೇಂದ್ರ ರಾವ್ ಅವರು ಪುರಸ್ಕಾರಗಳನ್ನು ವಿತರಣೆ ಮಾಡಿದರು. ಯೂತ್ ಫಾರ್ ಸೇವಾ ಶೈಕ್ಷಣಿಕ ನಿರ್ದೇಶಕ ಸಂತೋಷ್ ಶಾನುಭೋಗ, ಹಿರಿಯ ಸ್ವಯಂ ಸೇವಕಿ ಭಾವನಾ, ಬಿ. ಆರ್.ಪಿ.ಸಂತೋಷ್ ಶೆಟ್ಟಿ ಅವರು ಅತಿಥಿಗಳಾಗಿದ್ದು ಶುಭಾಶಂಸನೆ ಮಾಡಿದರು.

ಕಾಬೆಟ್ಟು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತ ಮಾಡಿದರು. ಸಹ ಶಿಕ್ಷಕ ಅಶೋಕ್ ಕುಮಾರ್ ಎಸ್ ಅವರು ಕಾರ್ಯಕ್ರಮ ನಿರೂಪಿಸಿದರು. ಶಾಂತಲಾ ಧನ್ಯವಾದ ಅರ್ಪಿಸಿದರು.

 
 
 
 
 
 
 
 
 
 
 

Leave a Reply