ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿಯ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಐ.ಎಮ್.ಎ ಭವನ ನಾಯರ್ ಕೆರೆ ಉಡುಪಿ ಇಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಶರತ್ ಕೆ ರಾವ್, ಪ್ರೊ ವೈಸ್ ಚಾನ್ಸಲರ್, ಮಾಹೆ ಮಣಿಪಾಲ್ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಗೌರವ ಅಥಿತಿಗಳಾಗಿ ಡಾ.ಪದ್ಮರಾಜ್ ಹೆಗ್ಡೆ, ಡೀನ್ ಕಸ್ತೂರ್ ಬಾ ಮೆಡಿಕಲ್ ಕಾಲೇಜು ಮಣಿಪಾಲ ಮತ್ತು ಡಾ. ಸುದೇಶ್ ಕುಮಾರ್ ಯು, ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ, ಉಡುಪಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ.ವಿ ಭಂಡಾರಿ ಅಧ್ಯಕ್ಷರು, ಐ.ಎಮ್.ಎ ಉಡುಪಿ-ಕರಾವಳಿ ಇವರು ವಹಿಸಿದ್ದರು.
ವೈದ್ಯರ ದಿನಾಚರಣೆಯ ಪ್ರಯುಕ್ತ ಹಿರಿಯ ವೈದ್ಯರಾದ ಡಾ. ಅಚ್ಚುತರಾಯ ಪ್ರಭು , ಡಾ.ಶುಭಗೀತಾ, ಡಾ.ರಾಮಚಂದ್ರ ಐತಾಳ್ ಇವರಿಗೆ ಡಾ. ಬಿ.ಸಿ ರಾಯ್ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಯಿತು. ಡಾ.ಕೇಶವ್ ನಾಯಕ್, ಗೌರವ ಕಾರ್ಯದರ್ಶಿ ಐ.ಎಮ್.ಎ ಉಡುಪಿ-ಕರಾವಳಿ ಇವರು ಸ್ವಾಗತಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ. ರಾಜಲಕ್ಷ್ಮೀ ಇವರು ನಿರ್ವಹಿಸಿದರು.