ವೆಬ್ಸೈಟ್ ಅನಾವರಣ ಹಾಗೂ ದೇಯಿ ಬೈದೆದಿ ಚಲನ ಚಿತ್ರ ಪ್ರದರ್ಶನ

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.) ಆದಿಉಡುಪಿ ಸಂಸ್ಥೆಯ ವೆಬ್ಸೈಟ್ ಅನಾವರಣ ಹಾಗೂ ದೇಯಿ ಬೈದೆದಿ ಚಲನ ಚಿತ್ರ ಪ್ರದರ್ಶನ ಕಾರ್ಯಕ್ರಮ ಬನ್ನಂಜೆ ಶ್ರೀ ನಾರಾಯಣ ಗುರು ಆಡಿಟೋರಿಯಂನಲ್ಲಿ *ಸಂಜೆ ಗಂಟೆ 5.30 ಕ್ಕೆ ಸರಿಯಾಗಿ ಜರಗಿತು.

ಅಧ್ಯಕ್ಷತೆ ಯನ್ನು ಸಂಸ್ಥೆ ಯ ಅಧ್ಯಕ್ಷರಾದ ದಾಮೋದರ ಕಲ್ಮಾಡಿ ವಹಿಸಿದ್ದರು ಮುಖ್ಯ ಅತಿಥಿ ಗಳಾಗಿ ಶ್ರೀ ಚಿತ್ತರಂಜನ್ ಅಧ್ಯಕ್ಷರು ಶ್ರೀ ಕ್ಷೇತ್ರ ಕಂಕನಾಡಿ ಬ್ರಹ್ಮ ಬೈದರ್ಕಳ ಗರೋಡಿ. ಶ್ರೀ ಮಾಧವ ಬನ್ನಂಜೆ ಅಧ್ಯಕ್ಷರು ಬಿಲ್ಲವರ ಸೇವಾ ಸಂಘ ಬನ್ನಂಜೆ ಉಡುಪಿ.

ಸನ್ಮಾನಿತಾರಾಗಿ ಕೆ ಮಂಜಪ್ಪ ಸುವರ್ಣ.ಸಂಸ್ಥೆ ಯ ಗೌರವ ಅಧ್ಯಕ್ಷರಾದ ಯು ನಾರಾಯಣ ಉಪಾಧ್ಯಕ್ಷರಾದ ಶೇಖರ್ಮಾಸ್ಟರ್ ಕಲ್ಮಾಡಿ. ಚಲನ ಚಿತ್ರ ನಟ ಹಾಗೂ ಸಂಸ್ಥೆ ಯ ವಿಶ್ವಸ್ಥ ರಾದ ಸೂರ್ಯೋದಯ್ ಪೆರಂಪಲ್ಲಿ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷರು ಸ್ವಾಗತಿಸಿದರು. ಪ್ರಾರ್ಥನೆ ಯನ್ನು ಚಲನ ಚಿತ್ರ ದಲ್ಲಿ ಹಾಡಿದ ಕಲಾವತಿ ದಯಾನಂದ ನೆರವೇರಿಸಿದರು.

ಅತಿಥಿಗಳಾದ ಚಿತ್ತರಂಜನ್ ರವರು ಕಾರ್ಯಕ್ರಮ ಉದ್ಘಾಟನೆ ಹಾಗೂ ವೆಬ್ಸೈಟ್ ಅನಾವರಣ ಗೊಳಿದರು.  ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ರಾದ ಕೆ ಮಂಜಪ್ಪ ಸುವರ್ಣ ರವರಿಗೆ ಫಲಪುಷ್ಪ ಸನ್ಮಾನ ಪತ್ರ ಹಾಗೂ ರೂ 5000/- ನೀಡಿ ಗೌರವ ಧನ ಗೌರವಿಸಲಾಯಿತು.

ಸಂಸ್ಥೆ ಯ ಗೌರವ ಅಧ್ಯಕ್ಷ ಯುನಾರಾಯಣ ಅತಿಥಿ ಮಾಧವ ಬನ್ನಂಜೆ, ಚಲನ ಚಿತ್ರ ನಟ ಸೂರ್ಯೋದಯ್ ಪೆರಂಪಲ್ಲಿಯವರಿಗೆ ಗೌರವ ಸನ್ಮಾನ ಮಾಡಲಾಯಿತು.

ವೆಬ್ಸೈಟ್ ಮಾಡಲು ಸಹಕರಿಸಿದ ಹರೀಶ್ ಎಮ್ ಕೆ ಹಾಗೂ ಇನ್ಫಾನ ಟೆಕ್ನಾಲಜಿ ಯ ಉಮೇಶ್ ಕಲ್ಮಾಡಿಯವರಿಗೆ ಸ್ಮರಣಿಕೆ ನೀಡಿ ಗೌರವಿಸ ಲಾಯಿತು . ಸುಮಾರು 400 ಕ್ಕೂ ಮಿಕ್ಕಿ ಜನರು ಆಗಮಿಸಿದ್ದರು.

ಕಾರ್ಯದರ್ಶಿ ಎಮ್ ಮಹೇಶ್ ಕುಮಾರ್ ವಂದಿಸಿದರು. ದಯಾನಂದ ಉಗ್ಗೇಲ್ಬೆಟ್ಟು ನಿರೂಪಿಸಿದರು. ಮತ್ರಿ ಕೋಟ್ಯಾನ್ ನೆರವೇಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply