ಕ್ಷಯ ಬಾದಿತ ಮತ್ತು ಕುಷ್ಠ ರೋಗ ನಿವಾರಿತ ಫಲನುಭವಿಗಳಿಗೆ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ

ಆದಿತ್ಯ ಟ್ರಸ್ಟ್ (ರಿ ) ನಕ್ರೆ, ಕಾರ್ಕಳ ಹಾಗೂ ಕುಕ್ಕುಂದೂರು ಫ್ರೆಂಡ್ಸ್ ಕ್ಲಬ್ ಮುಂಬೈ ಇವರ ಜಂಟಿ ಆಶ್ರಯದಲ್ಲಿ ಕ್ಷಯ ಬಾದಿತ ಮತ್ತು ಕುಷ್ಠ ರೋಗ ನಿವಾರಿತ ಫಲನುಭವಿಗಳಿಗೆ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮವು ದಿನಾಂಕ 19-02-2023 ರಂದು ಸಮಾಜ ಮಂದಿರ, ಟಪ್ಪಾಲು ಕಟ್ಟೆ, ಕುಕ್ಕುಂದೂರು ಇಲ್ಲಿ ಜರಗಿತು. ಬಾಲಾಜಿ ಕ್ಯಾಶು ಎಕ್ಸ್ಪೋರ್ಟ್, ಜಾರ್ಕಳ ಇದರ ಮಾಲಕರಾದ ಶ್ರೀ ವರದರಾಜ್ ನಾಯಕ್ ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಆದಿತ್ಯ ಟ್ರಸ್ಟಿನ ಅಧ್ಯಕ್ಷ ಶ್ರೀ ಮಂಜುನಾಥ ತೆಂಕಿಲ್ಲಾಯ ಮಾತನಾಡುತ್ತ, ಪೌಷ್ಟಿಕ ಆಹಾರವು ರೋಗ ಬಾದಿತರ ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುತ್ತದೆ. ಪ್ರೊಟೀನ್ಸ್ ಗಳು ವಿಟಮಿನ್ಸ್, ಕ್ಯಾಲ್ಸಿಯಂ ಇತ್ಯಾದಿಗಳು ಅವಶ್ಯವಾಗಿ ಆಹಾರದಲ್ಲಿರಬೇಕಾದ ವಸ್ತುಗಳಾಗಿವೆ. ಔಷಧಿ ಜೊತೆಗೆ ಪೂರಕ ಆಹಾರ ಸೇವನೆಯಿಂದ ರೋಗಗಳನ್ನು ಬೇಗನೆ ಗುಣಪಡಿಸಲು ಸಾಧ್ಯ. ಡಾ. ಅರವಿಂದ ಭಟ್ ಮಣಿಪಾಲ ಇವರ ಪ್ರಾಯೋಜಕತ್ವದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಾಧ್ಯವಾಯಿತು ಎಂದರು. ಶ್ರೀ ಸಂದೀಪ್, ಅಧ್ಯಕ್ಷ ಕುಕ್ಕುಂದೂರು ಫ್ರೆಂಡ್ಸ್ ಕ್ಲಬ್ ಮುಂಬೈ, ಶ್ರೀಮತಿ ಸಂಪಾ, ಆಶಾ ಕಾರ್ಯಕರ್ತೆ, ಶ್ರೀ ತ್ರಿವಿಕ್ರಮ ಕಿಣಿ ಗೌರವ ಅಧ್ಯಕ್ಷ ಕುಕ್ಕುಂದೂರು ಫ್ರೆಂಡ್ಸ್, ಇವರು ಮುಖ್ಯ ಅತಿಥಿಯಾಗಿದ್ದರು. ಶ್ರೀ ಹರೀಶ್ ಕುಕ್ಕುಂದೂರು ಇವರು ಕಾರ್ಯಕ್ರಮವನ್ನು ಸಂಯೋಜಸಿದ್ದರು. ಶ್ರೀ ರಮೇಶ್ ಇವರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply