ಶ್ರೀಕೃಷ್ಣ ಮಠದಲ್ಲಿ ಉಚಿತ ಪ್ರಾಣಯೋಗ ತರಬೇತಿ ಶಿಬಿರ ಉದ್ಘಾಟನೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠ ಶ್ರೀಕೃಷ್ಣ ಮಠ ಹಾಗೂ ಪತಂಜಲಿ ಯೋಗ ಸಮಿತಿ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಪ್ರತಿನಿತ್ಯ ಬೆಳಿಗ್ಗೆ 5:45 ರಿಂದ 7:00 ವರೆಗೆ ಉಚಿತ ಪ್ರಾಣಯೋಗ ತರಬೇತಿ ಶಿಬಿರವನ್ನು ಶ್ರೀಕೃಷ್ಣ ಮಠದ ಮಧ್ವಾಂಗಣದಲ್ಲಿ ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.

   ಎಲ್ಲರೂ ಜೀವನದಲ್ಲಿ ಯೋಗಾಭ್ಯಾಸವನ್ನು ನಿರಂತರವಾಗಿ ಮಾಡುವುದರಿಂದ ಮನಸಿನ ಹತೋಟಿ , ಕಾಯಿಲೆಗಳ ನಿಯತ್ನ್ರಣ , ಒತ್ತಡ ,ಅಶಾಂತಿ ಯಿಂದ ಮುಕ್ತಿ ಪಡೆಯಲು ಹಾಗು ಉತ್ತಮ ಆರೋಗ್ಯಕ್ಕಾಗಿ ಯೋಗದ ಜೊತೆ ಪ್ರಾಣಾಯಾಮ ಅಳವಡಿಸಿಕೊಳ್ಳಿ ಎಂದು ಶುಭಹಾರೈಸಿದರುು.   

ವಿಶ್ವನಾಥ್ ಭಟ್, ಲೀಲಾ ಅಮೀನ್, ಜಗದೀಶ್ ಉಪಸ್ಥಿತರಿದ್ದರು , ಯೋಗ ಗುರುಗಳಾದ ಬೇರೊಳ್ಳಿ ನಾಗರಾಜ್ ಶೇಟ್ ಶಿಬಿರಾರ್ಥಿಗಳಿಗೆ ವಿವಿಧ ರೀತಿಯ ಯೋಗ ತರಬೇತಿ ನೀಡಿದರು.

 
 
 
 
 
 
 
 
 
 
 

Leave a Reply