ಯು.ಪಿ.ಎಂ.ಸಿ ಪುಟ್ಬಾಲ್ ಟೀಂಗೆ ದ್ವಿತೀಯ ರನ್ನರ್ಸ್ ಅಪ್ ಪ್ರಶಸ್ತಿ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪುಟ್ಬಾಲ್ ತಂಡವು ಆಳ್ವಾಸ್ ಕಾಲೇಜು ಮೂಡಬಿದರೆಯಲ್ಲಿ ಜೂನ್ 15 ರಿಂದ 17 ರ ವರೆಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಉಡುಪಿ ವಲಯ ಅಂತರ್ಕಾಲೇಜು ಪುರುಷರ ಪುಟ್ಬಾಲ್ ಪಂದ್ಯಾಟದಲ್ಲಿ ದ್ವಿತೀಯ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದಿದೆ.

ಬಹುಮಾನ ವಿತರಣಾ ಸಮಾರಂಭದಲ್ಲಿ ಮಿಜಾರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮುಖ್ಯೋಪಾಧ್ಯಾಯರಾದ ಶ್ರೀ ನಾಗೇಶ್, ಆಳ್ವಾಸ್ ಸಂಸ್ಥೆಯ ಹಣಕಾಸು ಅಧಿಕಾರಿ ಶ್ರೀ ಶಾಂತಾರಾಮ್ ಕಾಮತ್, ಪಂದ್ಯಾಟದ ಪರಿವೀಕ್ಷಕರಾದ ಶ್ರೀ ಬಿಜು ಜಾಕೋಬ್, ಸಂಯೋಜಕರಾದ ಶ್ರೀ ಮಧು ಜಿ.ಆರ್ ರವರು ಯುಪಿಎಂಸಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಮತ್ತು ತಂಡದ ನಾಯಕ ಸಾರ್ಥಕ್ ಶೆಟ್ಟಿಯವರಿಗೆ ಬಹುಮಾನದ ಫಲಕ ವಿತರಿಸಿದರು.

ತಂಡದ ಆಟಗಾರರು ದೈ.ಶಿ.ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಮುಖೇನ ಯುಪಿಎಂಸಿ ಪ್ರಾಚಾರ್ಯೆ ಶ್ರೀಮತಿ ಆಶಾ ಕುಮಾರಿಯವರಿಗೆ ಪ್ರಶಸ್ತಿ ಫಲಕ ಹಸ್ತಾಂತರಿಸಿದರು.

 
 
 
 
 
 
 
 
 
 
 

Leave a Reply