ಶ್ರಮದಾನದ ಮೂಲಕ ರಸ್ತೆ ಶುಚಿಗೊಳಿಸಿದ ಯುವಕರ ತಂಡ

ಉಡುಪಿ :- ಹಿರಿಯಡಕ ಗ್ರೀನ್ ಪಾರ್ಕ್ ಶಾಲಾ ಬಳಿಯಿಂದ ಕೋಲ್ಯಾರು ಹನುಮಂತ ದೇವಾಲಯವರೆಗಿನ ರಸ್ತೆಯು ಗಿಡಗಂಟಿಗಳಿಂದ ಆವರಿಸಿ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಯುವಕರ ತಂಡ ಸ್ವಾತಂತ್ರೋತ್ಸವದಂದು ಇಡೀ ದಿನ ಶ್ರಮದಾನದ ಮೂಲಕ ರಸ್ತೆಯನ್ನು ಸುಂದರಗೊಳಿಸಿದೆ.

ಗಾ.ಪಂ ಈ ಕೆಲಸ ಮಾಡಲಿ ಎಂದು ಕಾಯುವವರು ಬಹಳಷ್ಟು ಮಂದಿ ನಮ್ಮ ಸಮಾಜದಲ್ಲಿದ್ದಾರೆ ಹೀಗಿರುವಾಗ ಯಾರ ನೆರವನ್ನು ಯಾಚಿಸದೆ ತಾವೇ ನಿರಂತರವಾಗಿ ಈ ರಸ್ತೆಯನ್ನು ಸ್ವಚ್ಚಗೊಳಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ.

ಕಳೆದ 6 -7 ವರ್ಷದಿಂದ ವರ್ಷಕ್ಕೆ ಕನಿಷ್ಟ 2 ಬಾರಿ ಈ ರಸ್ತೆಯನ್ನು ಸ್ವಚ್ಚಗೊಳಿಸುವ ಕಾರ್ಯ ಸ್ಥಳೀಯ ಯುವಕರು ಮಾಡುತ್ತಿರುವುದು ಅಭಿನಂದನೀಯ.ಈ ಯುವ ಜನಾಂಗದ ಕಾರ್ಯ ನೋಡಿ ಉಳಿದ ಗ್ರಾಮದಲ್ಲಿಯೂ ಈ ಕಾಯ೯ ನಡೆಯಬೇಕಾಗಿದೆ.

ವೆಂಕಟರಮಣ ಭಟ್, ಶರತ್ ಕುಮಾರ್ ನಾಯಕ್, ನಿಖಿಲ್ ನಾಯಕ್, ಪ್ರೇಮಚಂದ್ರ, ಸುಧೀರ್ ನಾಯಕ್, ಧ್ಯಾನ್ ಎಸ್ ನಾಯಕ್, ಅರುಣ್ ಶೆಟ್ಟಿ, ಉಪೇಂದ್ರ ನಾಯ್ಕ, ಬಾಲು, ರಾಘವೇಂದ್ರ ಪ್ರಭು,ಕರ್ವಾಲು ಮುಂತಾದವರಿದ್ದರು.

 
 
 
 
 
 
 
 
 
 
 

Leave a Reply