ಡಾ ಶ್ರೀಧರ ಎಚ್ ಜಿ, ಮುಂಡಿಗೆಹಳ್ಳಿ ಇವರರಿಗೆ ‘ಚಡಗ ಕಾದಂಬರಿ ಪ್ರಶಸ್ತಿ’

ಕೋಟೇಶ್ವರದ   ಎನ್. ಆರ್. ಎ. ಎಂ. ಎಚ್. ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ನೀಡಲಾಗುವ ಹದಿಮೂರನೆಯ ವರ್ಷದ ‘ಚಡಗ ಕಾದಂಬರಿ ಪ್ರಶಸ್ತಿ’ಗೆ, ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿರುವ ಡಾ ಶ್ರೀಧರ ಎಚ್ ಜಿ,  ಮುಂಡಿಗೆಹಳ್ಳಿ ಅವರ  ‘ಪ್ರಸ್ಥಾನ’  ಕಾದಂಬರಿಯು ಆಯ್ಕೆಯಾಗಿದೆ.

ಶ್ರೀಧರ್ ಎಚ್ ಜಿಯವರ ‘ಪ್ರಸ್ಥಾನ’ ಕಾದಂಬರಿಯು ಕಳೆದ ಶತಮಾನದ ನಲವತ್ತರ ದಶಕದಲ್ಲಿ ಮಲೆನಾಡು ಅನುಭವಿಸಿದ ಯಾತನೆಯ, ಪ್ರಾಯಶಃ ಹೆಚ್ಚು ಹೃದಯಸ್ಪರ್ಶಿ ಎಂದು ಗುರುತಿಸ ಬಹುದಾದ ಕಾದಂಬರಿಯಾಗಿದ್ದು, ಮನುಷ್ಯರ ಬದುಕಲ್ಲಿ ಈ ವಲಸೆಯೆನ್ನುವುದು ಅನಿವಾರ್ಯ, ಲಾಗಾಯ್ತಿನಿಂದ ಆಗುತ್ತಲೇ ಬಂದಿರುವುದು, ನಿರಂತರ ಪ್ರಕ್ರಿಯೆ, ಚಲನಶೀಲತೆಯ ಪರಿಣಾಮ ಎಂಬ ಉದಾರ ದರ್ಶನದ ಆರೋಗ್ಯಕಾರಿ ದಿಕ್ಕೊಂದು ಗುರುತಿಸಲ್ಪಡುತ್ತದೆ ಎಂಬ ಮಹತ್ವದ ಕಾರಣಕ್ಕೆ,  

 
ಈ   ಕಾದಂಬರಿಯನ್ನು  ಈ  ವರ್ಷದ ಚಡಗ ಕಾದಂಬರಿ ಪುರಸ್ಕಾರಕ್ಕೆ  ಆಯ್ಕೆಮಾಡಲಾಗಿದೆ ಎಂದು   ಮೂವರು ತೀರ್ಪುಗಾರರ  ಆಯ್ಕೆ ಸಮಿತಿಯು ತಿಳಿಸಿರುತ್ತದೆ ಎಂದು ಸ್ಪರ್ಧೆಯ ಸಂಚಾಲಕ ರಾದ ಪ್ರೊ ಉಪೇಂದ್ರ ಸೋಮಯಾಜಿಯವರು ತಿಳಿಸಿರುತ್ತಾರೆ. ಪ್ರಶಸ್ತಿಪತ್ರ, ಸ್ಮರಣಿಕೆ ಮತ್ತು ಹತ್ತು  ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡ ಈ ಪ್ರಶಸ್ತಿಯನ್ನು ಲೇಖಕ ಡಾ ಶ್ರೀಧರ ಎಚ್ ಜಿ ಇವರಿಗೆ ನವೆಂಬರ್ ತಿಂಗಳಲ್ಲಿ, ಕೋಟದಲ್ಲಿ ಆಯೋಜಿಸಲಾಗುವ ಸಾರ್ವಜನಿಕ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದೆಂದು ಪ್ರಶಸ್ತಿಸಮಿತಿಯ ಅಧ್ಯಕ್ಷ  ಡಾ.  ಭಾಸ್ಕರ ಆಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು. 
 
 
 
 
 
 
 
 
 
 
 

Leave a Reply