ಆರ್ಟ್ ಅಂಡ್ ಆರ್ಟಿಕಲ್ಸ್ ಪುಸ್ತಕ ಅನಾವರಣ

ಉಡುಪಿಯ ಸುನಾಗ್ ಆಸ್ಪತ್ರೆಯ ಆಶ್ರಯದಲ್ಲಿ ಉಡುಪಿಯ ಕಡಿಯಾಳಿ ಯಲ್ಲಿರುವ ಭರತಾಂಜಲಿ ಸಭಾಂಗಣದಲ್ಲಿ ಸುನವ್ಯ ಹಾಗೂ ಸಂಹಿತ ಇವರ ಆರ್ಟ್ ಅಂಡ್ ಆರ್ಟಿಕಲ್ಸ್ ಎಂಬ ಪುಸ್ತಕ ಆಗಸ್ಟ್ 9ರಂದು ಅನಾವರಣಗೊಂಡಿತು. ಸಾಹಿತಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಪುಸ್ತಕವನ್ನು ಲೋಕಾರ್ಪಣೆ ಗೊಳಿಸಿದರು.

ಸಮಾರಂಭದಲ್ಲಿ ಡಾ| ಎ. ವಿ ಬಾಳಿಗಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಮನೋವೈದ್ಯ ಡಾ| ಪಿ ವಿ ಭಂಡಾರಿ, ಡೆಂಟಲ್ ಕೇರ್ ನಿರ್ದೇಶಕ ಡಾ| ವಿಜಯೇಂದ್ರ ವಸಂತ್ , ಸುನಾಗ್ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ| ನರೇಂದ್ರ ಕುಮಾರ್ ಹಾಗೂ ಡಾ|ವೀಣಾ ನರೇಂದ್ರಕುಮಾರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply