ಶ್ರೀ ಶಾಂತಿಮತೀ ಪ್ರತಿಷ್ಠಾನದಿಂದ ವೀಣಾ ಪ್ರಸನ್ನ ಶಾನುಭೋಗ್ ಇವರಿಗೆ ಅಭಿನಂದನೆ

ಶ್ರೀ ಶಾಂತಿಮತೀ ಪ್ರತಿಷ್ಠಾನದ ಸಾಧಕರೆಡೆ – ನಮ್ಮನಡೆ ತಿಂಗಳ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ಸಾಧಕಿಯಾಗಿ ಶ್ರೀಮತಿ ವೀಣಾ ಪ್ರಸನ್ನ ಶಾನುಭೋಗ್ ಇವರನ್ನು ಗೌರವಿಸಲಾಯಿತು. ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರೊಜೆಕ್ಟ್ ನ ಭಜನಾ ತರಬೇತುದಾರರಾದ ಇವರು ಸುಮಾರು 25 ಕ್ಕೂ ಹೆಚ್ಚು ತಂಡಗಳಿಗೆ ಭಜನೆ ತರಬೇತಿಯನ್ನು ನೀಡುತ್ತಿದ್ದು ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ರಕ್ಷಣೆ ಹಾಗೂ ಪ್ರಸಾರದಲ್ಲಿ ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಹೊಟೇಲ್ ಶಿವಳ್ಳಿ ವೆಜ್ ನ ಮಾಲಿಕರಾದ ಶ್ರೀಯುತ ಗಣೇಶ ಅಡಿಗರು ಮುಖ್ಯ ಅತಿಥಿಯಾಗಿದ್ದರು. ವಿದ್ವಾನ್ ಡಾ| ವಿಜಯ ಮಂಜರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಶ್ರೀಮತಿ ಲಕ್ಷ್ಮೀ ಭಟ್ ಪ್ರಾರ್ಥಿಸಿ, ಶ್ರೀರಾಮಚಂದ್ರ ಉಡುಪ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಅಡಿಗ ಧನ್ಯವಾದ ಗ್ರೆದರು.
ಶ್ರೀ ಪ್ರಸನ್ನಾ ಶಾನುಬೋಗ್  ವಿಷ್ಣುಮಂಗಲ, ಪ್ರತಿಷ್ಠಾನದ ಮಾಜಿ ಅಧ್ಯಕ್ಷರಾದ ದಯಾನಂದ ವಾರಂಬಳ್ಳಿ,  ಶ್ರೀಮತಿ ವನಿತಾ ಉಪಾಧ್ಯಾಯ ಹಾಗೂ ಶ್ರೀಮತಿ ವೀಣಾ ಪ್ರಸನ್ನ ಶಾನುಭೋಗ್ ಇವರ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply