ಮೇ,25: ಪುತ್ತಿಗೆ ಮಠ ಪರ್ಯಾಯದ ಪೂರ್ವಬಾವಿ ಅಕ್ಕಿಮುಹೂರ್ತ

ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯರಾದ ಶ್ರೀ  ಸುಶ್ರೀ೦ದ್ರ ತೀರ್ಥ ಶ್ರೀಪಾದರೊಡಗೂಡಿ ನಡೆಸಲಿರುವ ಚತುರ್ಥ ಶ್ರೀ ಕೃಷ್ಣ ಪೂಜಾ ಪರ್ಯಾಯ ಮುಹೂರ್ತವದ ಮುನ್ನ ಅಕ್ಕಿಮುಹೂರ್ತವು  ಮೇ 25ರ ಬೆಳಿಗ್ಗೆ 8.45 ಕ್ಕೆ ಶ್ರೀ ಪುತ್ತಿಗೆ ಮಠದಲ್ಲಿ ನೆರವೇರಲಿದೆ.
 ಬೆಳಿಗ್ಗೆ 7.30 ಕ್ಕೆ ದೇವತಾ ಪ್ರಾರ್ಥನೆ, ಚಂದ್ರೇಶ್ವರ, ಅನಂತೇಶ್ವರ ಹಾಗು ಶ್ರೀ ಕೃಷ್ಣ ದೇವರ ದರ್ಶನ ಮಾಡಿ, ಚಿನ್ನದ ಪಾಲಕಿಯಲ್ಲಿ  ಶ್ರೀಮುಡಿಯ ಮೆರವಣಿಗೆಯನ್ನು ರಥಬೀದಿಯಲ್ಲಿ ಅದ್ದೂರಿಯಿಂದ ನಡೆಸಲಾಗುವುದು.
ಬಳಿಕ ತಂಡುಲ ಸಂಗ್ರಹ, ವಿವಿಧ ಸಂಘ ಸಂಸ್ಥೆಗಳಿಂದ ಅಕ್ಕಿ ಸಂಗ್ರಹ ಸಂಕಲ್ಪ, ಪುತ್ತಿಗೆ ಶ್ರೀಗಳಿಂದ ಆಶೀರ್ವಚನ,  ಫಲಮಂತ್ರಾಕ್ಷತೆ ಮುಂತಾದ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ ಎಂದು ಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply