ಕಪಿಲಾ ನದಿಯಲ್ಲಿ ಪೇಜಾವರ ಶ್ರೀಗಳ ಸೀಮೋಲ್ಲಂಘನ , ನಂಜುಂಡೇಶ್ವರನ ದರ್ಶನ

36 ನೇ ಚಾತುರ್ಮಾಸ್ಯ ವ್ರತವನ್ನು ಅತ್ಯಂತ ಅಪೂರ್ವವೆಂಬಂತೆ ಸಂಪನ್ನಗೊಳಿಸಿದ ಶ್ರೀ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರನ್ಬು  ಶುಕ್ರವಾರ ಮಧ್ಯಾಹ್ನ ಮೈಸೂರಿನಲ್ಲಿ ಭಜ್ತ ಜನತೆ ಭಾವುಕರಾಗಿ ಬೀಳ್ಕೊಟ್ಟರು.
ಬಳಿಕ ಸಂಜೆ ನಂಜನಗೂಡಿಗೆ ತೆರಳಿ ಕಪಿಲಾ ನದಿತೀರದಲ್ಲಿ ನದಿಗೆ ಹಾಲು ಅರಸಿನ ಕುಂಕುಮ ಪುಷ್ಪ ಸಹಿತ ಬಾಗಿನ ಅರ್ಪಿಸಿ ಮಂಗಳಾರತಿ ಬೆಳಗಿದರು. ಅನಂತರ ಅಲಂಕೃತ ತೆಪ್ಪದಲ್ಲಿ ಕುಳಿತು ನದಿಯ ಆ ಕಡೆಯ ದಡವನ್ನು ತಲುಪಿ ಸೀಮೋಲ್ಲಂಘನ ವಿಧಿ ಪೊರೈಸಿದರು. ನಂತರ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ನಂಜುಂಡೇಶ್ವರನ ದರ್ಶನ ಪಡೆದರು.
 ದೇವಳದ ಅರ್ಚಕರು, ಆಡಳಿತ ಮಂಡಳಿ ಪ್ರಮುಖರು ಶ್ರೀಗಳನ್ನು ಆದರದಿಂದ ಬರಮಾಡಿಕೊಂಡರು. ನಂಜನಗೂಡು ಶ್ರೀರಾಘವೇಂದ್ರ ಮಠಕ್ಕೂ ತೆರಳಿ ಗುರುರಾಯರ ಮೃತ್ತಿಕಾ  ವೃಂದಾವನ ದರ್ಶನಗೈದರು. ಇದರೊಂದಿಗೆ ಶ್ರೀಗಳ ಈ ಬಾರಿಯ ಚಾತುರ್ಮಾಸ್ಯ ವ್ರತ ಅಧಿಕೃತವಾಗಿ ಸಮಾಪನಗೊಂಡಿತು .
 
 
 
 
 
 
 
 
 
 
 

Leave a Reply