ಉಡುಪಿಯ ಕಿದಿಯೂರು ಹೋಟೆಲ್ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಅಂಗವಾಗಿ ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ ವಿದ್ವಾನ್ ರಾಘವೇಂದ್ರ ಉಪದ್ಯಾಯ , ಬಳಗದವರಿಂದ ಶ್ರೀ ನಾಗ ದೇವರಿಗೆ ನೂತನವಾಗಿ ನಿರ್ಮಿಸಿದ ಭವ್ಯ ರಜತ ಮಂಟಪ ದಲ್ಲಿ ಸರ್ಪ ಸೂಕ್ತ ಹವನ ನೆಡೆಯಿತು.
ಸೋಮವಾರ ಮಹಾ ರುದ್ರಯಾಗ, ಲಕ್ಷ್ಮೀ ನಾರಾಯಣ ಹೃದಯ ಹವನ , ಕಲಶಾಭಿಷೇಕ ಸಹಿತ ಮಹಾ ಪೂಜೆ , ಸುದರ್ಶನ ಹೋಮ , ಶ್ರೀ ಸೂಕ್ತ ಹವನದ ಮಹಾಪೂಜೆಯನ್ನು ಸೇವಾಕರ್ತ ಭುವನೇಂದ್ರ ಕಿದಿಯೂರು , ಹೀರಾ ಬಿ ಕಿದಿಯೂರು ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಯುವರಾಜ್ ಮಸ್ಕತ್ , ನಾಡೋಜ ಡಾ ಜಿ ಶಂಕರ್ , ಭವ್ಯಶ್ರೀ ಕಿದಿಯೂರು , ಪ್ರಿಯಾಂಕಾ ಕಿದಿಯೂರು , ಹರಿಯಪ್ಪ ಕೊಟ್ಯಾನ , ಭವ್ಯಶ್ರೀ ಕಿದಿಯೂರು, ಡಾ ವಿಜಯೇಂದ್ರ , ಗಣೇಶ ರಾವ್ , ಹಿರಿಯಣ್ಣ ಕಿದಿಯೂರು , ಜೀತೇಶ ಬಿ ಕಿದಿಯೂರು , ಬೃಜೇಶ್ ಕಿದಿಯೂರು , ರಮೇಶ ಕಿದಿಯೂರು , ಪ್ರಕಾಶ್ ಸುವರ್ಣ, ಚಂದ್ರೇಶ್ ಪಿತ್ರೋಡಿ ಹಾಗೂ ಸಾವಿರಾರು ಭಕ್ತರೂ ಉಪಸ್ಥಿತರಿದ್ದರು.