ಕಿದಿಯೂರು ಹೋಟೆಲ್ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ಹೋಮ ಹವನ ಸಂಪನ್ನ

ಉಡುಪಿಯ  ಕಿದಿಯೂರು ಹೋಟೆಲ್ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಅಂಗವಾಗಿ  ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ  ವಿದ್ವಾನ್  ರಾಘವೇಂದ್ರ  ಉಪದ್ಯಾಯ , ಬಳಗದವರಿಂದ  ಶ್ರೀ  ನಾಗ ದೇವರಿಗೆ ನೂತನವಾಗಿ ನಿರ್ಮಿಸಿದ ಭವ್ಯ ರಜತ ಮಂಟಪ ದಲ್ಲಿ ಸರ್ಪ ಸೂಕ್ತ ಹವನ ನೆಡೆಯಿತು.
 ಸೋಮವಾರ  ಮಹಾ ರುದ್ರಯಾಗ,  ಲಕ್ಷ್ಮೀ ನಾರಾಯಣ ಹೃದಯ ಹವನ ,  ಕಲಶಾಭಿಷೇಕ ಸಹಿತ ಮಹಾ ಪೂಜೆ , ಸುದರ್ಶನ ಹೋಮ , ಶ್ರೀ ಸೂಕ್ತ ಹವನದ   ಮಹಾಪೂಜೆಯನ್ನು  ಸೇವಾಕರ್ತ  ಭುವನೇಂದ್ರ ಕಿದಿಯೂರು , ಹೀರಾ ಬಿ ಕಿದಿಯೂರು  ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಯುವರಾಜ್ ಮಸ್ಕತ್ , ನಾಡೋಜ  ಡಾ  ಜಿ  ಶಂಕರ್ , ಭವ್ಯಶ್ರೀ ಕಿದಿಯೂರು , ಪ್ರಿಯಾಂಕಾ ಕಿದಿಯೂರು , ಹರಿಯಪ್ಪ ಕೊಟ್ಯಾನ , ಭವ್ಯಶ್ರೀ ಕಿದಿಯೂರು,   ಡಾ  ವಿಜಯೇಂದ್ರ , ಗಣೇಶ  ರಾವ್ , ಹಿರಿಯಣ್ಣ  ಕಿದಿಯೂರು , ಜೀತೇಶ  ಬಿ  ಕಿದಿಯೂರು , ಬೃಜೇಶ್ ಕಿದಿಯೂರು , ರಮೇಶ ಕಿದಿಯೂರು , ಪ್ರಕಾಶ್  ಸುವರ್ಣ, ಚಂದ್ರೇಶ್ ಪಿತ್ರೋಡಿ ಹಾಗೂ  ಸಾವಿರಾರು  ಭಕ್ತರೂ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply