ಜಿಲ್ಲಾ ವರ್ತಕರ ಸಂಘದಿಂದಸಂಕಷ್ಟದಲ್ಲಿರುವ ಜನತೆಗೆ ಆಹಾರ ಸಾಮಗ್ರಿ ವಿತರಣೆ   

ಉಡುಪಿ: ಜಿಲ್ಲಾ ವರ್ತಕರ ಸಂಘದಿಂದ ಇಲ್ಲಿನ ತೆಂಕನಿಡಿಯೂರು ಕೇಳಾರ್ಕಳಬೆಟ್ಟು ಕೊರೊನಾ ಪೀಡಿತರ ಮನೆ ಮತ್ತು ಪರಿಸರದ 6 ಮನೆಗಳಿಗೆ ಹಾಗೂ ಉಡುಪಿ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಹಣ್ಣು ಹಂಪಲು, ಬಿಸ್ಕೆಟ್, ಬೇಕರಿ ತಿನಿಸು, ಮಾಸ್ಕ್, ನೀರಿನ ಬಾಟಲ್ ವಿತರಿಸಲಾಯಿತು.

ಲಾಕ್ ಡೌನ್ ಆರಂಭದಿಂದ ಅಲ್ಲಲ್ಲಿ ಸಂಕಷ್ಟದಲ್ಲಿರುವ ಜನತೆಗೆ ಆಹಾರ ಸಾಮಗ್ರಿಗಳನ್ನು ಸಂಸ್ಥೆ ನೀಡುತ್ತಾ ಬಂದಿದೆ ಎಂದು ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ ತಿಳಿಸಿದರು.​ ಉಪಾಧ್ಯಕ್ಷ ವಸಂತ, ಕಾರ್ಯದರ್ಶಿ ನಾಗರಾಜ್ ಅಡಿಗ, ವಿಶ್ವನಾಥ್ ಗಂಗೊಳ್ಳಿ, ಕ್ರೀಡಾಪಟು ಅರುಣಕಲಾ, ಅನುಶ್ರೀ, ಶ್ರೀಧರ ನಾಯಕ್ ​ಉಪಸ್ಥಿತರಿದ್ದರು 

​​
 
 
 
 
 
 
 
 
 
 
 

Leave a Reply