ಮಲ್ಪೆ ಶ್ರೀ ಸೋಮಶೇಖರ ಭಟ್ ಇವರಿಗೆ ಶ್ರದ್ಧಾಂಜಲಿ ಸಭೆ

ಕುಂಜಿಬೆಟ್ಟು ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘ (ರಿ) ಇದರ ಮಾಜಿ ಅಧ್ಯಕ್ಷರು ಕೀರ್ತಿಶೇಷ ಮಲ್ಪೆ ಶ್ರೀ ಸೋಮಶೇಖರ ಭಟ್ ಇವರಿಗೆ ಕುಂಜಿಬೆಟ್ಟು ಸಹಕಾರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷರಾದ ಶ್ರೀ ಕೆ ರಾಘವೇಂದ್ರ ಕಿಣಿಯವರು ಸೋಮಶೇಖರ್ ಭಟ್ ಅವರು ಸಂಘದ ಸ್ಥಾಪನೆ ಮತ್ತು ಬೆಳವಣಿಗೆಗೆ ನೀಡಿದ ಸಹಕಾರವನ್ನು ನೆನೆದು ಅವರ ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಅನಂತಕೃಷ್ಣ, ಉಪಾಧ್ಯಕ್ಷರಾದ ಸತೀಶ್ ಭಾಗವತ್ ಹಾಗೂ ನಿರ್ದೇಶಕರಾದ ಶ್ರೀ ಜಯಚಂದ್ರ, ಚಂದ್ರಶೇಖರ್ ಕುಂದರ್, ಶ್ರೀಮತಿ ಲೀಲಾ ಅಮೀನ್, ದಯಾನಂದ ಸೇರಿಗಾರ್, ಸತೀಶ್ ಕುಲಾಲ್, ಶ್ರೀ ನಾಗರಾಜ್ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಜ್ಯೋತಿ ಅಂಚನ್, ಪವಿತ್ರ, ಸಂಧ್ಯಾ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply