ಸಾಂದೀಪನ್ ಪ್ರೌಢಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ

ಬೈಂದೂರಿನ ಸಾಂದೀಪನ್ ಪ್ರೌಢಶಾಲೆಯಲ್ಲಿ 24-12-2023 ರಂದು ಜರುಗಿದ ಸಂಸ್ಥಾಪಕರ ದಿನಾಚರಣೆಯಂದು ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯನ್ನ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಯಕ್ಷಗಾನ ಕಲೆ ಕಲಾವಿದರ ಕ್ಷೇಮ ಚಿಂತನೆಗೆ ನೀಡುತ್ತಿರುವ ನಿರಂತರ ಕೊಡುಗೆಯನ್ನು ಅನುಲಕ್ಷಿಸಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಪ್ರಶಸ್ತಿ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ವಿಧಾನಪರಿಷತ್ ಸದಸ್ಯರಾಗಿದ್ದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಆರ್. ಕೆ. ಸಂಜೀವ ರಾವ್, ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಂಜಿತ್ ಪ್ರಕಾಶ್ ರಾವ್, ಸತ್ಯಸ್ವರೂಪಾನಂದ ಸ್ವಾಮೀಜಿ, ಮುಖ್ಯೋಪಾಧ್ಯಾಯರಾದ ಬಿ. ವಿಶ್ವೇಶ್ವರ ಅಡಿಗ (ಸಂಸ್ಥೆಯ ಆಜೀವ ಸದಸ್ಯರು), ಅಶೋಕ್ ಕುಂದಾಪುರ, ಎಸ್. ವಿ. ಭಟ್, ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು. ಗೌರವ ಪುರಸ್ಕಾರವು ಅಭಿನಂದನಾ ಪತ್ರದೊಂದಿಗೆ ರೂ. 20 ಸಾವಿರ ನಗದು ಪುರಸ್ಕಾರವನ್ನು ಒಳಗೊಂಡಿದೆ.

 
 
 
 
 
 
 
 
 
 
 

Leave a Reply