ತೆಂಕನಿಡಿಯೂರು ಗ್ರಾಮ ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಗೊಂಡ ಅಂಚೆ ಕಚೇರಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೋಭಾ ನಾಯಕ್ ಉದ್ಘಾಟಿಸಿದ ರು.
ಅಂಚೆ ಉಪ ಅಧೀಕ್ಷಕ ಕೃಷ್ಣರಾಜ ವಿಟ್ಟಲ ಭಟ್ ರವರು ದೀಪ ಬೆಳಗಿಸಿ, ಅಂಚೆ ಕಚೇರಿಯ ಕೆಲಸಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯ ತ್ ಕಾರ್ಯದರ್ಶಿ ವಸಂತಿ, ಪಿ ಡಿ ಓ ಸುರೇಶ್ ಬಂಗೇರ, ಪಂಚಾಯತ್ ಸದಸ್ಯರಾದ , ಪೃಥ್ವಿರಾಜ್ ಶೆಟ್ಟಿ, ಮಂಜುನಾಥ ಆಚಾರ್, ಅಂಚೆ ಮೇಲ್ವಿಚಾರಕರಾದ ರವಿ ಕಡೆಕಾರ್, ಅಂಚೆಪಾಲಕಿ ರಕ್ಷಿತಾ ಹಾಗೂ ಕವಿರಾಜ್ ಉಪಸ್ಥಿತ ರಿದ್ದರು.
ಅಂಚೆ ಸಹಾಯಕ ಸುರೇಂದ್ರ ಪ್ರಾರ್ಥನೆ ಮಾಡಿ, ಕೋಟ ಸಂತೋಷ್ ಮಧ್ಯಸ್ಥ ಕಾರ್ಯಕ್ರಮ ನಿರೂಪಿಸಿದರು. ಆರತಿ ಮಾಧವ್ ಧನ್ಯವಾದವನ್ನು ನೀಡಿದರು.