ಆಮ್ ಆದ್ಮಿ ಪಾರ್ಟಿ ವೀಕ್ಷಕ ಅಶೋಕ ಎಡಮಲೆ ​ಉಡುಪಿ ಸಭೆಯಲ್ಲಿ ಭಾಗಿ

ಆಮ್ ಆದ್ಮಿ ಪಾರ್ಟಿ ಉಡುಪಿ ಜಿಲ್ಲಾ ಘಟಕದ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ಪಕ್ಷದ ಚಟುವಟಿಕೆ ಹಾಗೂ ಮುಂದಿನ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಗೆ ತಯಾರಿ, ಅಭ್ಯರ್ಥಿಗಳ ಆಯ್ಕೆ  ಬಗ್ಗೆ ಉಡುಪಿ ದ.ಕ. ಜಿಲ್ಲಾ ವೀಕ್ಷಕರಾದ ಅಶೋಕ ಎಡಮಲೆ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾ ನಾಯಕರಾದ, ಸುರೇಶ್ ಭಂಡಾರಿ, ಆಲ್ಫ್ರೆಡ್, ಮಹಮ್ಮದ್,  ರಾಜ್ಯ ವಿದ್ಯಾರ್ಥಿ ನಾಯಕ ಅಬ್ದುಲ್ ರಜಾಕ್ ಮರ್ದಾಳ ವೇದಿಕೆಯಲ್ಲಿ ಉಪಸ್ಥಿತರಿದ್ದು, ಆಶ್ಲೇ, ಜೈಕಿಶನ್, ಮಂಜುನಾಥ್ ಮತ್ತು ಮೋಹನ್ ಕಾರ್ಯಕ್ರಮ ಸಂಯೋಜನೆ ನಡೆಸಿದರು.​ ಜಿಲ್ಲೆಯ ಹಲವಾರು ನಾಯಕರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply