ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಇಂರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ

ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಇಂರ‍್ಯಾಕ್ಟ್ ಕ್ಲಬ್ ೨೦೨೨-೨೩ರ ಪದಗ್ರಹಣ ಸಮಾರಂಭವನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಕೆ. ರತ್ನಾಕರ ಶೆಣೈಯವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಉಡುಪಿ ರೋಟರಿ ನಿರ್ದೇಶಕರಾದ ಜನಾರ್ದನ್ ಭಟ್ ಇಂರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷ ನಮನ್ ಕಾರಂತ್‌ನಿಗೆ ಕಾಲರಿಂಗ್ ಮಾಡಿ ಸುತ್ತಮುತ್ತಲಿನವರೊಡನೆ ಸ್ನೇಹ ಭಾವದಿಂದ ಇದ್ದು ಸಮಾಜ ಸೇವೆಯನ್ನು ಮಾಡುತ್ತಾ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ನೂತನ ತಂಡವನ್ನು ಅಭಿನಂದಿಸುತ್ತಾ ಹೇಳಿದರು.

ಡಾ| ವಾಣಿಶ್ರೀ ಐತಾಳ್ ಮುಖ್ಯ ಅತಿಥಿಯಾಗಿ ಆಗಮಿಸಿ ಸ್ವಾಸ್ಥ್ಯ ಮತ್ತು ಆರೋಗ್ಯದ ಬಗ್ಗೆ ಮಕ್ಕಳಿಗೆ ಕಿವಿಮಾತುಗಳನ್ನು ಹೇಳಿದರು.

ಉಡುಪಿ ರೋಟರಿಯ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ, ಉಡುಪಿ ರೋಟರಿ ಇಂರ‍್ಯಾಕ್ಟ್ ಕ್ಲಬ್ ಚೇರ್‌ಮಾನ್ ಪದ್ಮಿನಿ ಭಟ್ ಉಪಸ್ಥಿತರಿದ್ದು ಮಕ್ಕಳಿಗೆ ಹಿತವಚನಗಳನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ.ಕೆ. ವಿನಾಯಕ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖೋಪಾಧ್ಯಾಯಿನಿ ಶ್ರೀಮತಿ ರೇಶ್ಮಾ, ರೋಟರಿ ಕಾರ್ಯದರ್ಶಿ ಶ್ರೀ.ಗುರುರಾಜ ಭಟ್ ಹಾಗೂ ಸದಸ್ಯರು, ರಕ್ಷಕ-ಶಿಕ್ಷಕ ಸಂಘದ ಕೋಶಾಧಿಕಾರಿ ಜಗದೀಶ್ ಕಾಮತ್ ಹಾಗೂ ಇಂರ‍್ಯಾಕ್ಟ್ ಕ್ಲಬ್ ಶಾಲಾ ಸಂಯೋಜಕಿ ಶ್ರೀಮತಿ ಮಾಧವಿ ಉಪಸ್ಥಿತರಿದ್ದರು.

ಇಂರ‍್ಯಾಕ್ಟ್ ಕ್ಲಬ್‌ನ ನಿರ್ಗಮನ ಅಧ್ಯಕ್ಷೆ ಕು.ನಿಧಿ ಸ್ವಾಗತಿಸಿ, ನೂತನ ಅಧ್ಯಕ್ಷ ನಮನ್ ಕಾರಂತ್ ಸದಸ್ಯರನ್ನು ಪರಿಚಯಿಸಿದರು. ಕು. ವಾಸವಿ ವರದಿಯನ್ನು ವಾಚಿಸಿದರು. ಸ್ವಾತಿ ಮತ್ತು ತಂಡ ಪ್ರಾರ್ಥಿಸಿ, ಕು.ಝೋಯ ಕಾರ್ಯಕ್ರಮವನ್ನು ನಿರೂಪಿಸಿ, ಕು. ಪಂಚಮಿ ವಂದಿಸಿದರು.

 
 
 
 
 
 
 
 
 
 
 

Leave a Reply